Advertisement

ವ್ಯಕ್ತಿ ಮೇಲೆ ಮೂವರು ಯುವಕರ ದಾಳಿ: ಹಣ ದರೋಡೆ

12:49 AM Mar 20, 2024 | Shreeram Nayak |

ಹೊಳೆಹೊನ್ನೂರು: ಸ್ಥಳೀಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ 22,000 ರೂ. ಕಿತ್ತುಕೊಂಡು ಪರಾರಿ ಆಗಿರುವ ಘಟನೆ ಪಟ್ಟಣ ಸಮೀಪದ ಅರದೋಟ್ಲು ಗ್ರಾಮದ ಬಳಿ ಸೋಮವಾರ ಸಂಜೆ ನಡೆದಿದೆ.

Advertisement

ಅರದೋಟ್ಲು ಗ್ರಾಮದ ದೊರೆ ಅವರು ಭದ್ರಾವತಿಯಿಂದ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರುವಾಗ ಗ್ರಾಮದ ಬಳಿ ಪಲ್ಸರ್‌ ಬೈಕ್‌ನಲ್ಲಿ ಮೂವರು ಯುವಕರು ಎದುರು ಬಂದು ಅಡ್ಡಗಟ್ಟಿದ್ದಾರೆ. ತತ್‌ಕ್ಷಣ ಒಬ್ಬ ಯುವಕ ಚಾಕು ತೋರಿಸಿ ಹಣ ಹಾಗೂ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ತಪ್ಪಿಸಿಕೊಳ್ಳಲು ಹೋದ ಸಂದರ್ಭದಲ್ಲಿ ದೊರೆ ಅವರಿಗೆ ಚಾಕುವಿನಿಂದ ಇರಿದು ಕೊಲೆ ಬೆದರಿಕೆ ಹಾಕಿ ಅವರ ಬಳಿ ಇದ್ದ 22,000 ರೂ. ಕಸಿದುಕೊಂಡು ಪರಾರಿ ಆಗಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದಕ್ಕೂ ಮುನ್ನಾ ಸಿದ್ಲಿàಪುರ-ಸನ್ಯಾಸಿ ಕೋಡಮಗ್ಗೆ ನಡುವೆ ಭೂಪಾಳಂ ಫ್ಯಾಕ್ಟರಿ ಏರಿಯಾದಲ್ಲಿ ಅರಬಿಳಚಿ ಗ್ರಾಮದ ಶಾಲೆ ಶಿಕ್ಷಕರೊಬ್ಬರು ಶಾಲೆ ಮುಗಿಸಿಕೊಂಡು ಎಂದಿನಂತೆ ತಮ್ಮ ಬನ್ನೀಕೆರೆ ಗ್ರಾಮಕ್ಕೆ ಹೋಗುತ್ತಿದ್ದರು. ಮನೆಯಿಂದ ಮೊಬೈಲ್‌ಗೆ ಕರೆ ಬಂದಿತೆಂದು ರಸ್ತೆ ಪಕ್ಕದಲ್ಲಿ ಬೈಕ್‌ ನಿಲ್ಲಿಸಿ ಮಾತನಾಡುವಾಗ ಇದೇ ಮೂವರು ಯುವಕರು ಬೈಕ್‌ ನಿಲ್ಲಿಸಿ ಹೊಳಲೂರಿಗೆ ಹೋಗುವ ದಾರಿ ಕೇಳಿದ್ದಾರೆ. ಅಷ್ಟರಲ್ಲಿ ಒಬ್ಬ ಯುವಕ ಬೈಕ್‌ನಿಂದ ಇಳಿದು ಚಾಕು ತೋರಿಸಿ ಹಣ ಕೇಳಿದ್ದಾನೆ. ಅಷ್ಟರಲ್ಲಿ ಶಿಕ್ಷಕ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದಾಗ ಇನ್ನೋರ್ವ ಯುವಕ ತನ್ನಲ್ಲಿದ್ದ ಚಾಕು ಎಸೆದಿದ್ದಾನೆ. ಇದರಿಂದ ಶಿಕ್ಷಕ ಕಿವಿ ಭಾಗದಲ್ಲಿ ಗಾಯ ಆಗಿದ್ದು ಪಟ್ಟಣ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next