Advertisement

ಕೋಳಿ ಕೊಡದ್ದಕ್ಕೆ ಕಾಲು ಮುರಿದ! ಸಿಂಘು ಗಡಿಯಲ್ಲಿ ಮತ್ತೊಂದು ಕೃತ್ಯ

09:07 PM Oct 22, 2021 | Team Udayavani |

ಚಂಡೀಗಢ: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿ, ಸುದ್ದಿಯಾಗಿದ್ದ ಸಿಂಘು ಗಡಿಯಲ್ಲಿ ಇದೀಗ ಮತ್ತೂಂದು ಅಮಾನವೀಯ ಘಟನೆ ವರದಿಯಾಗಿದೆ. ನಿಹಾಂಗ್‌ ಸಿಖ್‌ವೊಬ್ಬ ಕಾರ್ಮಿಕನೊಬ್ಬನ ಮೇಲೆ ರಾಡಿನಿಂದ ದಾಳಿ ಮಾಡಿರುವುದಾಗಿ ಹೇಳಲಾಗಿದೆ.

Advertisement

ಮನೋಜ್‌ ಪಾಸ್ವಾನ್‌ ಎಂಬ ವ್ಯಕ್ತಿ ಕೋಳಿಗಳನ್ನು ಸಾಗಾಟ ಮಾಡುತ್ತಿದ್ದಾಗ, ಅವನನ್ನು ತಡೆದ ನವೀನ್‌ ತನಗೆ ಉಚಿತವಾಗಿ ಕೋಳಿ ನೀಡುವಂತೆ ಕೇಳಿದ್ದಾನೆ. ಅದಕ್ಕೆ ಮನೋಜ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಆತನ ಕಾಲಿಗೆ ರಾಡಿನಿಂದ ಹೊಡೆದಿದ್ದಾನೆ. ಮನೋಜ್‌ ಕಾಲು ಮುರಿದಿದೆ. ಈ ಘಟನೆಯ ವಿಡಿಯೋ ವೈರಲ್‌ ಆಗಿದೆ. ನವೀನ್‌ ತಾನು ನಿಹಾಂಗ್‌ ಗುಂಪಿನ ಸದಸ್ಯ ಎಂದು ಹೇಳಿಕೊಂಡಿದ್ದು, ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಉದ್ಯೋಗಸ್ಥರ ಸಂಖ್ಯೆಯಲ್ಲಿ ಭಾರೀ ಏರಿಕೆ

ಆಶಿಶ್‌ ಮಿಶ್ರಾ ಪೊಲೀಸ್‌ ಕಸ್ಟಡಿಗೆ:
ಇದೇ ವೇಳೆ, ಲಖೀಂಪುರ ಖೇರಿ ಪ್ರಕರಣದಲ್ಲಿ ಬಂಧಿಸಲಾಗಿರುವ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ, ಆಶಿಶ್‌ ಮಿಶ್ರಾರನ್ನು ಶುಕ್ರವಾರ ಸ್ಥಳೀಯ ಕೋರ್ಟ್‌, 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next