Advertisement

ನಕಲಿ ಹತ್ತಿ ಬೀಜ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

12:50 PM Jun 19, 2022 | Team Udayavani |

ಶಹಾಪುರ: ರೈತರಿಗೆ ನಕಲಿ ಹತ್ತಿ ಬೀಜದ ಪಾಕೆಟ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಕಲಿ ಹತ್ತಿ ಬೀಜದ ಸಮೇತ ಬಂಧಿಸಿದ ಘಟನೆ ಭೀಮರಾಯನ ಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಾಲೂಕಿನ ಮುಡಬೂಳ ಗ್ರಾಮ ಸಮೀಪದ ಆಂಧ್ರ ಕ್ಯಾಂಪ್‌ನಲ್ಲಿ ವ್ಯಕ್ತಿಯೊಬ್ಬ ನಕಲಿ ಹತ್ತಿ ಬೀಜಗಳ ಪಾಕೆಟ್‌ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸ್‌ ತಂಡ ದಾಳಿ ನಡೆಸಿದ್ದು, ನಕಲಿ ಹತ್ತಿ ಬೀಜದ ಪಾಕೆಟ್‌ ಸಮೇತ ಆಂಧ್ರ ಮೂಲದ ಇಲ್ಲಿನ ಕ್ಯಾಂಪ್‌ ನಿವಾಸಿಯಾದ ಶ್ರೀನಿವಾಸಲು ವೆಂಕಟೇಶ್ವರಲು ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಸ್ಪಿ ಡಾ| ಸಿ.ಬಿ. ವೇದಮೂರ್ತಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನಿರ್ದೇಶನದಂತೆ ಶಹಾಪುರ ಸಿಪಿಐ ಚನ್ನಯ್ಯ ಹಿರೇಮಠ ನೇತೃತ್ವದಲ್ಲಿ ಭೀಮರಾಯನ ಗುಡಿ ಪೊಲೀಸ್‌ ಠಾಣಾ ಪಿಎಸ್‌ಐ ಸಂತೋಷ ರಾಠೊಡ ತಂಡ ಮತ್ತು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸುನೀಲಕುಮಾರ ಕೃಷಿ ಅಧಿಕಾರಿಗಳ ತಂಡ ಮುಡಬೂಳ ಗ್ರಾಮದ ಆಂಧ್ರ ಕ್ಯಾಂಪ್‌ನಲ್ಲಿ ಸಂಗ್ರಹಿಸಿದ್ದ 61,360 ರೂ. ಮೌಲ್ಯದ ಸುಮಾರು 80 ನಕಲಿ ಹತ್ತಿ ಬೀಜದ ಪಾಕೆಟ್‌ ವಶಕ್ಕೆ ಪಡೆಯಲಾಗಿದೆ. ಭೀಮರಾಯನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next