Advertisement

Vanangaan: “ಶೂಟಿಂಗ್‌ ವೇಳೆ ಹೊಡೆದು,ಬೈದ ನಿರ್ದೇಶಕ; ಸಿನಿಮಾದಿಂದ ಹೊರನಡೆದ ನಟಿ

02:07 PM Feb 28, 2024 | Team Udayavani |

ಚೆನ್ನೈ: ನಿರ್ದೇಶಕ ಬಾಲ ಅವರ ʼ ವನಂಗಾನ್ʼ ಸಿನಿಮಾ ರಿಲೀಸ್‌ ಗೂ ಮುನ್ನ ಸಂಕಷ್ಟಕ್ಕೆ ಸಿಲುಕಿದೆ. ನಾಯಕ ಸೂರ್ಯ ಸಿನಿಮಾದಿಂದ ಹೊರ ನಡೆದ ಬಳಿಕ ಇದೀಗ ನಾಯಕಿಯಾಗಿ ಆಯ್ಕೆ ಆಗಿದ್ದವರು ಕೂಡ ನಿರ್ದೇಶಕನ ಮೇಲೆ ಆರೋಪವನ್ನು ಮಾಡಿದ್ದಾರೆ.

Advertisement

ಇತ್ತೀಚೆಗೆ ಮಾಲಿವುಡ್‌ ನಲ್ಲಿ ಬಂದಿರುವ ʼ ‘ಪ್ರೇಮಲು’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ಮಮಿತಾ ಬೈಜು ಅವರು ʼವನಂಗಾನ್‌ʼ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದಕ್ಕೆ ಆಯ್ಕೆ ಆಗಿದ್ದರು. ಈ ಸಿನಿಮಾದಲ್ಲಿ ಮೊದಲು ನಾಯಕನಾಗಿ ಸೂರ್ಯ ಅವರು ಆಯ್ಕೆ ಆಗಿದ್ದರು. ಆದರೆ ಕಾರಣಾಂತರ ಗಳಿಂದ ಸೂರ್ಯ ಸಿನಿಮಾದಿಂದ ಹೊರ ನಡೆದಿದ್ದಾರೆ.

ಇದೀಗ ನಟಿ ಮಮಿತಾ ನಿರ್ದೇಶಕ ಬಾಲ ಅವರ ಮೇಲೆ ಆರೋಪವೊಂದನ್ನು ಮಾಡಿದ್ದಾರೆ. “ಸಿನಿಮಾದ ಸೀನ್‌ ವೊಂದಕ್ಕೆ ನಾನು ಜಾನಪದ ಡ್ರಮ್‌ಗಳನ್ನು ಬಳಸಬೇಕಿತ್ತು. ಅದನ್ನು ಹೇಗೆ ಬಳಸುತ್ತಾರೆ ಎನ್ನುವುದು ನನಗೆ ಮೊದಲು ತಿಳಿದಿರಲಿಲ್ಲ. ಈ ಕಾರಣದಿಂದ ನಾನು ನಿರ್ದೇಶಕರ ಬಳಿ ನಾನು ಅದರ ಅಭ್ಯಾಸ ಮಾಡಬೇಕೆಂದು ಹೇಳಿದೆ. ಆದರೆ ಅವರು ಬೇರೆ ಅವರು ಹೇಗೆ ಮಾಡುತ್ತಾರೆ ಹಾಗೆ ನೋಡಿ ಮಾಡು ಎಂದರು. ಇದಾದ ಕೆಲ ಸಮಯದಲ್ಲೇ ಶೂಟ್‌ ಗೆ ಕರೆದರು. ಇದರಿಂದ ನಾನು ಭೀತಿಗೆ ಒಳಗಾಗಿದ್ದೆ. ಆದರೆ ಮೂರು ಟೀಕ್‌ ನಲ್ಲಿ ನಾನು ಅದನ್ನು ಕಲಿತೆ. ಆದರೆ ಈ ಪ್ರಕ್ರಿಯೆಯಲ್ಲಿ ನನಗೆ ಅವರು ಬೈಯ್ದಿದ್ದಾರೆ  ಹಾಗೂ ಭುಜದ ಮೇಲೆ ಹೊಡೆದಿದ್ದಾರೆ. ಆದರೆ ಬಾಲ ಅವರು ಈ ಮೊದಲೇ ತನಗೆ ಅವರ ಕಾರ್ಯವೈಖರಿ ಬಗ್ಗೆ ಹೇಳಿದ್ದರು. ಶೂಟಿಂಗ್‌ ಸೆಟ್‌ ನಲ್ಲಿ ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದನ್ನು” ನಟಿ ಹೇಳಿದ್ದಾರೆ.

ಆದರೆ ಶೂಟಿಂಗ್‌ ಪೂರ್ಣಗೊಳಿಸದೆ ಮಮಿತಾ ಅವರು ಪ್ರಾಜೆಕ್ಟ್‌ನಿಂದ ಹಿಂದೆ ಸರಿಯುವ ನಿರ್ಧಾರವನ್ನು ಮಾಡಿದರು.

ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಅರುಣ್ ವಿಜಯ್, ರೋಶನಿ ಪ್ರಕಾಶ್, ಸಮುದ್ರಕನಿ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್‌ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next