Advertisement

ಹೆಚ್ಚಿಸಿದ ತೈಲ ಬೆಲೆಯ ಪಾಲು ರಾಜ್ಯಗಳಿಗೂ ಬರಲಿ

06:59 PM Nov 09, 2021 | Team Udayavani |

ಕೋಲ್ಕತ: ಇಂಧನ ಬೆಲೆ ಏರಿಕೆ ಮಾಡಿದ್ದರಿಂದ ಕೇಂದ್ರಕ್ಕೆ 4 ಲಕ್ಷ ಕೋಟಿ ರೂಪಾಯಿ ಸಿಕ್ಕಿದ್ದು, ಆ ಹಣವನ್ನು ಎಲ್ಲ ರಾಜ್ಯಗಳಿಗೆ ಸರಿಸಮಾನವಾಗಿ ಹಂಚಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

Advertisement

ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. “ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಮಾಡುವುದರ ಮೂಲಕ ಕೇಂದ್ರ 4 ಲಕ್ಷ ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಿದೆ. ಆದರೀಗ ರಾಜ್ಯ ಸರ್ಕಾರಗಳಿಗೆ ವ್ಯಾಟ್‌ ಕಡಿಮೆ ಮಾಡಲು ಹೇಳುತ್ತಿದೆ. ಕೇಂದ್ರ ಆ ಹಣವನ್ನು ಎಲ್ಲ ರಾಜ್ಯಗಳಿಗೆ ಹಂಚಬೇಕು’ ಎಂದು ಮಮತಾ ಬ್ಯಾನರ್ಜಿ ನುಡಿದಿದ್ದಾರೆ.

ಇದನ್ನೂ ಓದಿ:ತುಳಿತಕ್ಕೊಳಗಾದ ಎಲ್ಲರೂ,ನಾನು ಸಹ ದಲಿತ : ಸಿದ್ದರಾಮಯ್ಯ

ಪರಿಹಾರ ಘೋಷಣೆ: ಇದೇ ವೇಳೆ ಬಿಭೂಮ್‌ ಜಿಲ್ಲೆಯ ಡಿಯೋಚಾ-ಪಚಾಮಿ ಕಲ್ಲಿದ್ದಲು ಗಣಿ ಯೋಜನೆಯಿಂದಾಗಿ ಆಸ್ತಿ ಕಳೆದುಕೊಳ್ಳುವವರಿಗೆ ಹಂಚುವುದಕ್ಕಾಗಿ 10 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವುದಾಗಿಯೂ ಮಮತಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next