Advertisement
ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ಗಳನ್ನು ವಾಪಸ್ ಕರೆಸಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸುಮಾರು ಒಂದು ವಾರಗಳ ಕಾಲ ಬೋಟುಗಳನ್ನು ಬಂದರಿನಲ್ಲಿ ನಿಲ್ಲಿಸಲಾಗಿತ್ತು.ಆದರೆ ಬಳಿಕ ಚಂಡಮಾರುತದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಸಮುದ್ರದ ಅಲೆ ಮತ್ತು ಗಾಳಿಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎನ್ನುತ್ತಾರೆ ಮೀನುಗಾರರು. ಒಟ್ಟಿನಲ್ಲಿ ಋತು ಆರಂಭಗೊಂಡು ಕೇವಲ ಎರಡು ತಿಂಗಳ ಅವಧಿಯಲ್ಲೆ ಎರಡು ಬಾರಿ ಹವಾಮಾನದ ವೈಪರೀತ್ಯದ ಕಾರಣ ಬೋಟುಗಳನ್ನು ನಿಲ್ಲಿಸಬೇಕಾಗಿತ್ತು. ಈ ಹಿಂದೆ ಆಗಸ್ಟ್ 10ರಂದು ಚಂಡಮಾರುತದಿಂದಾಗಿ ದೋಣಿಗಳು ವಾಪಸ್ ದಡ ಸೇರಿದ್ದು, ಈ ವೇಳೆ ಸುಮಾರು ಒಂದು ವಾರಗಳ ಕಾಲ ಮೀನುಗಾರಿಕೆ ಸ್ಥಗಿತಗೊಂಡಿತ್ತು.
ಮೀನುಗಾರಿಕೆ ವಲಯ ಇತರ ವ್ಯಾಪಾರ ವಹಿವಾಟುಗಳಿಗೆ ಕೊಂಡಿ ಯಾಗಿವೆ. ಮಂಜುಗಡ್ಡೆ ಸ್ಥಾವರ, ರಫ್ತು ವಹಿವಾಟು, ಆಹಾರ ಪದಾರ್ಥಗಳು ಪ್ರಧಾನವಾಗಿದೆ. ಪ್ರಸ್ತುತ ಎಲ್ಲ ವಹಿವಾಟುಗಳು ಸ್ತಬ್ದವಾಗಿ ಆರ್ಥಿಕತೆಗೆ ದೊಡ್ಡ ಹೊಡೆತವಾಗಿದೆ. ಸರ್ವ ಋತು ಬಂದರುಗಳಲ್ಲಿ ಒಂದಾದ ಮಲ್ಪೆ ಬಂದರಿನಲ್ಲಿ ಆರಂಭದ ಮೂರು ತಿಂಗಳು ದಿನಂಪ್ರತಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಈ ಬಾರಿ ಋತು ಆರಂಭದ ದಿನದಿಂದಲೂ ಮೀನುಗಾರಿಕೆ ನಷ್ಟದ ಹಾದಿಯಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೇರಳ ಮೀನು ಸಿಗುವ ವೇಳೆಯಲ್ಲಿಯೇ ಈ ರೀತಿ ಆಗಿರುವುದು ಮೀನುಗಾರರನ್ನು ನಿರಾಸೆ ತರಿಸಿದೆ.