Advertisement

ಮಾಶಾಳದಲ್ಲಿ ಮಲ್ಲಿಕಾರ್ಜುನ ಲಿಂಗ ಪ್ರಾಣ ಪ್ರತಿಷ್ಠಾಪನೆ

11:33 AM Feb 10, 2018 | Team Udayavani |

ಕಲಬುರಗಿ: ಅಫಜಲಪುರ ತಾಲೂಕು ಮಾಶಾಳ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಕರ್ತೃ ಗದ್ದುಗೆಗೆ ಕಂತಿ ಲೇಪನ ಮಾಡಿದ ಮಲ್ಲಿಕಾರ್ಜುನ ಲಿಂಗ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಕೈಲಾಶಲಿಂಗೇಶ್ವರ ಶಿವಾಚಾರ್ಯ ರಿಂದ ಮಹಾರುದ್ರಾಭಿಷೇಕದೊಂದಿಗೆ ಲಿಂಗಕ್ಕೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.

Advertisement

ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಲ್ಲಿಕಾರ್ಜುನ ದೇವರ ಮೂರ್ತಿ ಪಲ್ಲಕ್ಕಿ ಮೆರವಣಿಗೆ ಸಾಗಿ ಬಂದು ಪ್ರತಿಷ್ಠಾಪನೆ ನೆರವೇರಿತು. ಶರಣಬಸಪ್ಪ ಕಲ್ಯಾಣಿ ನಾಗಣಸೂರ, ಸಿದ್ದು ಹೂಗಾರ, ಧೂಳಪ್ಪ ರಾಜಾ, ಸಿದ್ದು ರೇವೂರ, ಶಿವು ಪಾರಗೊಂಡ, ಶಿವು, ಬಸು, ಬಾಬು ಅಯ್ಯಸೂರ, ಚಂದುರಾವ ಪ್ರಧಾನಿ, ಶರಣು ಭರಮಚಿ, ಮಲ್ಲಿ ಜಿಡ್ಡಗಿ, ಸಂತೋಷ, ಸಿದ್ದು ಪತಾಟೆ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next