Advertisement

ಆಪ್ತ ಸ್ನೇಹಿತ ಧರಂ ನಿಧನದ ಸುದ್ದಿ ಕೇಳಿ ಕಣ್ಣೀರು ಹಾಕಿದ ಖರ್ಗೆ!

06:11 PM Jul 27, 2017 | Sharanya Alva |

ಬೆಂಗಳೂರು: ನಾನು ಮತ್ತು ಧರಂಸಿಂಗ್ 50 ವರ್ಷ ರಾಜಕಾರಣ ಮಾಡಿದ್ದೇವೆ. ನನಗೆ ಏನು ಹೇಳಬೇಕೆಂಬುದು ಗೊತ್ತಾಗುತ್ತಿಲ್ಲ. ಕುಟುಂಬದ ದೊಡ್ಡಣ್ಣ ನಮ್ಮನ್ನು ಬಿಟ್ಟು ಹೋದಂತಾಗಿದೆ…ಇದು ರಾಜ್ಯರಾಜಕಾರಣದಲ್ಲಿ ಆಪ್ತ ಗೆಳೆಯರಾಗಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಸಂತಾಪದ ನುಡಿ.

Advertisement

ಸ್ನೇಹಿತನ ಸಾವಿನ ಸುದ್ದಿ ಕೇಳಿ ಕಣ್ಣೀರು ಹಾಕಿದ ಖರ್ಗೆ, ಧರಂಸಿಂಗ್ ಜತೆಗಿನ ಸುದೀರ್ಘ  ಒಡನಾಟವನ್ನು ನೆನಪಿಸಿಕೊಂಡರು.

 ಧರಂಸಿಂಗ್ ನಿಧನ ದೊಡ್ಡ ಆಘಾತ ತಂದಿದೆ. ಅವರು ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ಎಂದೂ ಯಾರೊಂದಿಗೂ ಜಗಳಕ್ಕಿಳಿದವರಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next