Advertisement

ಮಳವಳ್ಳಿ: ಟ್ರ್ಯಾಕ್ಟರ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

09:41 PM Aug 06, 2022 | Team Udayavani |

ಮಳವಳ್ಳಿ: ತಾಲೂಕಿನ ಟಿ. ಕಾಗೇಪುರ ಗೇಟ್ ಬಳಿ ಶನಿವಾರ ರಾತ್ರಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Advertisement

ಮೃತ ದುರ್ದೈವಿ ತೊರೆಕಾಡನಹಳ್ಳಿ ಗ್ರಾಮದ ರಾಜೇಶ್(43) ಎಂದು ತಿಳಿದುಬಂದಿದೆ.

ಬಿಎಸ್ ಎನ್ ಎಲ್ ನೌಕರರಾಗಿದ್ದ ರಾಜೇಶ್ ಕರ್ತವ್ಯ ಮುಗಿಸಿಕೊಂಡು ಮದ್ದೂರು ಕಡೆಯಿಂದ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಮರ ತುಂಬಿದ ಟ್ಯ್ರಾಕ್ಟರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ಜಗದೀಶ್, ಎಎಸ್ಐ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next