Advertisement

ಮಳಲಿ ಮಸೀದಿ ವಿವಾದ : ಹೈಕೋರ್ಟ್‌ ಆದೇಶದ ಬಳಿಕವೇ ಸಿವಿಲ್‌ ಕೋರ್ಟಿನಲ್ಲಿ ವಿಚಾರಣೆ

11:24 PM Jun 14, 2022 | Team Udayavani |

ಮಂಗಳೂರು : ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಆದೇಶ ಹೊರಬಿದ್ದ ಬಳಿಕವೇ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ.

Advertisement

ಮಂಗಳೂರಿನ ಸಿವಿಲ್‌ ನ್ಯಾಯಾಲಯದಲ್ಲಿ ಮಂಗಳವಾರ ಕೂಡ ವಿಹಿಂಪ ಪರ ವಕೀಲ ಚಿದಾನಂದ ಕೆದಿಲಾಯ ಮತ್ತು ಮಸೀದಿ ಆಡಳಿತ ಮಂಡಳಿ ಪರ ವಕೀಲ ಎಂ.ಪಿ. ಶೆಣೈ ವಾದ – ಪ್ರತಿವಾದ ಮಂಡಿಸಿದರು. ಆದರೆ ಈ ಬಗ್ಗೆ ಯಾವುದೇ ಆದೇಶ ನೀಡಬಾರದೆಂದು ಹೈಕೋರ್ಟ್‌ ನಿರ್ದೇಶನ ನೀಡಿರುವುದರಿಂದ ಮುಂದಿನ ವಿಚಾರಣೆಯನ್ನು ಹೈಕೋರ್ಟ್‌ ಆದೇಶದ ಅನಂತರ ಜೂ. 17ಕ್ಕೆ ನಡೆಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.

“ವಕ್ಫ್ ಕಾಯಿದೆ ಮತ್ತು ಪೂಜಾ ಸ್ಥಳ ಕಾಯಿದೆ ಪ್ರಕಾರ ವಿಎಚ್‌ಪಿ ಪರ ವಕೀಲರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಿವಿಲ್‌ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಇದಕ್ಕೆ
ಸಂಬಂಧಿಸಿದ ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ಮಸೀದಿ ಆಡಳಿತ ಮಂಡಳಿಯ ಪರ ವಕೀಲರು ವಾದಿಸಿದ್ದಾರೆ. “ಈ ಅರ್ಜಿ ಸಿವಿಲ್‌ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ’ ಎಂದು ವಿಹಿಂಪ ಪರ ವಕೀಲರು ವಾದಿಸಿ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ : ಮಾಜಿ ಕ್ರಿಕೆಟಿಗರು, ಅಂಪೈರ್‌ಗಳಿಗೆ ಪಿಂಚಣಿ ದುಪ್ಪಟ್ಟು: ಬಿಸಿಸಿಐ

ಹೈಕೋರ್ಟ್‌ ಆದೇಶ ಕುತೂಹಲ
ಮಂಗಳೂರಿನ ಸಿವಿಲ್‌ ನ್ಯಾಯಾ ಲಯವು ಅರ್ಜಿ ವಿಚಾರಣೆಯ ಅಧಿ ಕಾರ ವ್ಯಾಪ್ತಿ ಕುರಿತು ಆದೇಶ ನೀಡುವ ಮೊದಲು ಜ್ಞಾನವಾಪಿ ಮಾದರಿ ಯಲ್ಲಿ ಕಮಿಷನರ್‌ ಮೂಲಕ ಸರ್ವೇ ನಡೆಸುವ ಬಗ್ಗೆ ಆದೇಶ ನೀಡಬೇಕು ಎಂದು ವಿಹಿಂಪ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾ ರಣೆ ನಡೆ ಸಿದ ಹೈಕೋರ್ಟ್‌ ಈ ಬಗ್ಗೆ ಸೋಮವಾರ ಮಂಗಳೂರಿನ ಸಿವಿಲ್‌ ನ್ಯಾಯಾಯಲಕ್ಕೆ ನಿರ್ದೇಶನ ನೀಡಿತ್ತು. ವಿಚಾರಣೆ ನಡೆಸಿದರೂ ಯಾವುದೇ ಆದೇಶ ನೀಡಬಾರದು ಎಂದಿತ್ತು. ಮಳಲಿ ಮಸೀದಿಯಲ್ಲಿ ದೇವಾಲಯ ಹೋಲುವ ರಚನೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೋರ್ಟ್‌ ಕಮಿಷನರ್‌ ಮೂಲಕ ಸರ್ವೇ ನಡೆಸಬೇಕು ಎಂದು ವಿಹಿಂಪ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದರಿಂದ ಈ ಬಗ್ಗೆ ಹೈಕೋರ್ಟ್‌ ನೀಡಲಿರುವ ಆದೇಶ ಕುತೂಹಲ ಮೂಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next