Advertisement

ಮಲಾಡ್‌ ತಥಾಸ್ತು ಫೌಂಡೇಶನ್‌: ಸಾಮೂಹಿಕ ಸತ್ಯನಾರಾಯಣ ಪೂಜೆ

02:12 PM Sep 02, 2021 | Team Udayavani |

ಮಲಾಡ್‌: ಮಲಾಡ್‌ ಪೂರ್ವದ ಪುರೋಹಿತ ವೇ| ಮೂ| ಸತೀಶ್‌ ಭಟ್‌ ಅವರ ನೇತೃತ್ವದಲ್ಲಿ ಸ್ಥಾಪಿತಗೊಂಡ ತಥಾಸ್ತು ಫೌಂಡೇಶನ್‌ ಪ್ರತಿ ತಿಂಗಳು ಹುಣ್ಣಿಮೆಯಂದು ಮಲಾಡ್‌ ಪರಿಸರದ ವಿವಿಧ ಕ್ಷೇತ್ರಗಳಲ್ಲಿ ಸತ್ಯನಾರಾಯಣ ಪೂಜೆಯೊಂದಿಗೆ ಅನ್ನ ದಾನವನ್ನು ನಡೆಸುತ್ತಾ ಬರುತ್ತಿದ್ದು, ಆ. 22ರಂದು ಹುಣ್ಣಿಮೆಯ ದಿನ ದಂದು ಮಲಾಡ್‌ ಪೂರ್ವದ ದತ್ತ ಮಂದಿರ ರೋಡ್‌ನ‌ಲ್ಲಿರುವ ದತ್ತ ಮಂದಿರದಲ್ಲಿ ಸಾರ್ವಜನಿಕ ಸತ್ಯನಾರಾಯಣ ಮಹಾಪೂಜೆ ಸತೀಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ನಡೆಯಿತು.

Advertisement

ಪೂಜೆಯಲ್ಲಿ ಸ್ಥಳೀಯ ಭಜನ ಮಂಡಳಿ ಮತ್ತು ಮಲಾಡ್‌ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಭಜನ ಮಂಡಳಿ ಪಾಲ್ಗೊಂಡಿದ್ದವು. ಪಾಲ್ಗೊಂಡ ಎಲ್ಲ ಭಜನ ಮಂಡಳಿಗಳು ಮತ್ತು ಪೂಜೆಗೆ ಸಹಕಾರ ನೀಡಿದ ದಾನಿಗಳನ್ನು ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ವೇ| ಮೂ| ಸತೀಶ್‌ ಭಟ್‌ ಗೌರವಿಸಿ ಆಶೀರ್ವಚನ ನೀಡಿ, ತಥಾಸ್ತು ಫೌಂಡೇಶನ್‌ನ ಮೂಲಕ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಅದರಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಒಂದಾಗಿದೆ. ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಭಯ ದೂರಗೊಳಿಸಿ ಧೈರ್ಯ ತುಂಬುವ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಸಾಮೂಹಿಕ ಪೂಜೆಯ ಪ್ರಾರ್ಥನೆಗಳಲ್ಲಿ ವಿಶಿಷ್ಟವಾದ ಶಕ್ತಿಯಿದೆ ಎಂದು ತಿಳಿಸಿ ಶುಭ ಹಾರೈಸಿದರು.

ಇದನ್ನೂ ಓದಿ:‘ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್’ ಮರುನಾಮಕರಣಕ್ಕೆ ಸಂಸದ ಪ್ರತಾಪ್ ಸಿಂಹ ಆಗ್ರಹ ?

ಈ ಸಂದರ್ಭದಲ್ಲಿ ತಥಾಸ್ತು ಫೌಂಡೇಶನ್‌ ಉಪಾಧ್ಯಕ್ಷ ಶ್ರೀಧರ ಪೂಜಾರಿ, ಕಾರ್ಯದರ್ಶಿ ಉದಯ ಶೆಟ್ಟಿ,
ಕೋಶಾಧಿಕಾರಿ ದಿನೇಶ್‌ ಅಮೀನ್‌, ಪದಾಧಿಕಾರಿಗಳು ಮತ್ತು ಭರತ್‌, ಲಕ್ಷ್ಮಣ್‌ ರಾವ್‌, ದಿನೇಶ್‌ ಸುವರ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next