Advertisement

ಪರಿಸರ ರಕ್ಷಣೆಗೆ ಆದ್ಯತೆ ನೀಡಿ

07:22 PM Jun 06, 2021 | Team Udayavani |

ಕೋಲಾರ: ಪರಿಸರ ಸಂರಕ್ಷಣೆಗೆ ನಾವುಸ್ವಯಂ ಪ್ರೇರಿತರಾಗಿ ಗಿಡ ಮರಗಳನ್ನುಬೆಳೆಸಬೇಕಾಗಿದೆ ಎಂದು ಪ್ಲಾಸ್ಟಿಕ್‌ ತ್ಯಾಜ್ಯಮುಕ್ತ ಅಭಿಯಾನದ ಜಿಲ್ಲಾ ಸಂಚಾಲಕ ಮಹೇಶ್‌ ರಾವ್‌ ಕದಂ ಅಭಿಪ್ರಾಯಪಟ್ಟರು.

Advertisement

ನಗರದ ಅಂತರಗಂಗೆ ತಪ್ಪಲಿನಲ್ಲಿಹಮ್ಮಿಕೊಂಡಿದ್ದ ವಿಶ್ವ ಪರಿಸರದಿನಾಚರಣೆಯಲ್ಲಿ ಗಿಡ ನೆಟ್ಟು ಮಾತನಾಡಿದಅವರು, ಪ್ರಕೃತಿಯನ್ನು ಉಳಿಸುವ ಬೆಳೆಸುವಕಾರ್ಯತುರ್ತಾಗಿ ಆಗಬೇಕಾಗಿದೆ. ನಾವು ಆಪ್ತರಿಗಾಗಿ ಲಕ್ಷಾಂತರ ಉಡುಗೊರೆ ನೀಡುತ್ತೇವೆ.

ಆದರೆ, ಪರಿಸರಕ್ಕೆಪೂರಕವಾಗುವಂತೆ ಒಂದು ಸಸಿ ನೆಟ್ಟು ಪೋಷಿಸಿದಾಗ ಅದು ಮುಂದಿನ ದಿನಗಳಲ್ಲಿನೆರವಾಗುತ್ತದೆ. ನಮ್ಮ ಸುಸ್ಥಿರ ಬದುಕಿಗೂಅನುಕೂಲವಾಗುತ್ತದೆ ಎಂದರು.ಜಿಲ್ಲಾ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಕಾರ್ಯಕ್ರಮಅಧಿಕಾರಿ ಡಾ.ಶರಣಪ್ಪ ಗಬ್ಬೂರ್‌, ಶಿಕ್ಷಕಕಲಾವಿದ ಮಾಸ್ತೇನಹಳ್ಳಿ ನಾರಾಯಣಸ್ವಾಮಿ,ಬಂಡಾರಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next