Advertisement
ಜಿಲ್ಲಾ ಕನ್ನಡ, ಚುಟುಕು ಸಾಹಿತ್ಯ ಪರಿಷತ್, ಜನಮಿಡಿತ ದಿನಪತ್ರಿಕೆ, ಭಾವ ಸಿರಿ ಪ್ರಕಾಶನ, ಗಾನಶ್ರೀ ಸ್ವರಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೆ.ಪಿ. ಅಣಬೇರು ತಾರೇಶ್ ಅವರ ನಾಲ್ಕನೇ ಕವನ ಸಂಕಲನ ‘ನೀರ ಮೇಲಿನ ರಂಗೋಲಿ’ ಮತ್ತು ‘ಹಳ್ಳಿಹೈದನ ನೊಂದ ಹಾಡು’ ಎಂಬ ಮಕ್ಕಳ ಗೀತೆಗಳ ಧ್ವನಿಸುರುಳಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮೊಬೈಲ್ ದಾಸ್ಯತನಕ್ಕೆ ಒಳಗಾಗುತ್ತಿರುವ ಮಕ್ಕಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ, ಮಾನವೀಯತೆ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕಿದೆ ಎಂದರು.
Related Articles
Advertisement
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಜಾನಪದ ಸಾಹಿತ್ಯ ಯಾವುದೇ ವಿದ್ವಾಂಸರಿಂದ ಹುಟ್ಟಿಲ್ಲ. ಅದು ಹಳ್ಳಿಗಾಡಿನಿಂದ ಬಂದ ಸಾಹಿತ್ಯ. ಈಗ ಶಿಷ್ಟ ಸಾಹಿತ್ಯ ರೂಪಕ್ಕೆ ತಲುಪಿದೆ. ಅದರಲ್ಲೂ ಕನ್ನಡ ಭಾಷೆ ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ. ಸಾಹಿತ್ಯದಲ್ಲಿ ಅನೇಕ ವಿಧಾನಗಳಲ್ಲಿ ಕವನ ಶ್ರೇಷ್ಠವಾದ ವಿಧಾನವಾಗಿದೆ. ಅಂತಹದ್ದೇ ಮಾದರಿಯಲ್ಲಿ ತಾರೇಶ್ ಅಣಬೇರು ಅವರ “ನೀರಿನ ಮೇಲಿನ ರಂಗೋಲಿ’ ಕವನ ಸಂಕಲನವಾಗಿದೆ ಎಂದರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಚ್. ರಾಜಶೇಖರ್ ಗುಂಡಗಟ್ಟಿ, ಅಣಬೇರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಣಬೇರು ಶಿವಮೂರ್ತಿ, ಡಾ| ಶಶಿಕಲಾ ಕೃಷ್ಣಮೂರ್ತಿ, ಡಾ| ಪ್ರೀತಿ, ಗಂಗಮ್ಮ ಪರಮೇಶ್ವರಪ್ಪ, ಕವಿ ಕೆ.ಪಿ. ಅಣಬೇರು ತಾರೇಶ್, ಉಮಾದೇವಿ ಇತರರು ಇದ್ದರು.
ಎಲ್ಲರಂತೆ ಸಾಹಿತಿಗಳಿಗೂ ಸಾವಿದೆ. ಆದರೆ ಅವರ ಸಾಹಿತ್ಯಕ್ಕೆ ಎಂದೆಂದಿಗೂ ಸಾವಿಲ್ಲ. ಸಾಹಿತ್ಯದ ಚಿಂತನೆಗಳು ಪ್ರಪಂಚದಲ್ಲಿ ಸೂರ್ಯ-ಚಂದ್ರ ಇರುವವರೆಗೂ ಪುಸ್ತಕಗಳಲ್ಲಿ ಇರುತ್ತವೆ. –ಸಿ.ಸಿ. ಹೇಮಲತಾ, ಅಕ್ಕನ ಮನೆ ಪ್ರತಿಷ್ಠಾನದ ಅಧ್ಯಕ್ಷೆ