Advertisement

ಚಿಕ್ಕಮಗಳೂರು ಎಸ್ ಪಿ ಮುಂದೆ ಶರಣಾದ ಶಿವಮೊಗ್ಗ ಹಂದಿ ಅಣ್ಣಿ ಹತ್ಯೆ ಆರೋಪಿಗಳು

09:00 AM Jul 19, 2022 | Team Udayavani |

ಚಿಕ್ಕಮಗಳೂರು: ಐದು ದಿನಗಳ ಹಿಂದೆ ಶಿವಮೊಗ್ಗದ ವಿನೊಭನಗರ ಚೌಕಿ ಬಳಿ ನಡೆದಿದ್ದ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಗಳು ಚಿಕ್ಕಮಗಳೂರು ಎಸ್ ಪಿ ಮುಂದೆ ಶರಣಾಗಿದ್ದಾರೆ.

Advertisement

ಹಂದಿ ಅಣ್ಣಿಯ ಹತ್ಯೆ ಪ್ರಕರಣ ಎಂಟು ಮಂದಿ ಆರೋಪಿಗಳು ಚಿಕ್ಕಮಗಳೂರು ಎಸ್ ಪಿ ಅಕ್ಷಯ್ ಮುಂದೆ ಶರಣಾಗಿದ್ದಾರೆ. ತಡರಾತ್ರಿ ಎಸ್ಪಿ ಕಛೇರಿಗೆ ಆಗಮಿಸಿದ ಎಂಟು ಮಂದಿ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಎಸ್ ಪಿ ಮುಂದೆ ಹೇಳಿಕೊಂಡಿದ್ದಾರೆ. ಬಳಿಕ ಚಿಕ್ಕಮಗಳೂರು ಪೊಲೀಸರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಜುಲೈ 14ರಂದು ಬೆಳ್ಳಂಬೆಳಗ್ಗೆ ಶಿವಮೊಗ್ಗದ ವಿನೋಭ ನಗರದಲ್ಲಿ ರೌಡಿ ಶೀಟರ್ ಹಂದಿ ಅಣ್ಣಿಯ ಕೊಲೆಯಾಗಿತ್ತು. ಇನ್ನೋವಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಹಂದಿ ಅಣ್ಣಿಯನ್ನು ಹತ್ಯೆಗೈದಿದ್ದರು. ದುಷ್ಕರ್ಮಿಗಳು ಹಂದಿ ಅಣ್ಣಿ ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಘಟನೆ ಬಳಿಕ ಇನ್ನೋವಾ ವಾಹನದಲ್ಲೇ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಇದನ್ನೂ ಓದಿ:ಕಷ್ಟ ಅರಿತ ಅತ್ತೆ-ಮಾವನ ಸಾಧನೆ ಅಪಾರ: ಟಿವಿ ಚರ್ಚೆಯಲ್ಲಿ ರಿಷಿ ಸುನಕ್‌ ವಿನೀತ ಮಾತು

Advertisement

Udayavani is now on Telegram. Click here to join our channel and stay updated with the latest news.

Next