Advertisement

ಮನೆಗೆಲಸದವರ ನೋಂದಣಿ ಮಾಡದಿದ್ದರೆ ಅನುದಾನವಿಲ್ಲ

03:10 AM Jun 01, 2018 | Karthik A |

ಹೊಸದಿಲ್ಲಿ: ಮನೆಗೆಲಸದವರ ನೋಂದಣಿ ಮಾಡಿಸದ ರಾಜ್ಯ ಸರಕಾರಗಳಿಗೆ ಅನುದಾನವನ್ನು ನೀಡದಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಅಸಂಘಟಿತ ಕೆಲಸಗಾರರ ಸಾಮಾಜಿಕ ಭದ್ರತೆ ಕಾಯ್ದೆ ಅಡಿಯಲ್ಲಿ ಜನವರಿ 11ರಂದು ಸುಪ್ರೀಂಕೋರ್ಟ್‌ ನೀಡಿರುವ ಆದೇಶಕ್ಕೆ ಹಲವು ರಾಜ್ಯಗಳು ಬದ್ಧವಾಗಿಲ್ಲ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಈ ಸೂಚನೆ ನೀಡಿದೆ.

Advertisement

ಕಳೆದ ಫೆಬ್ರವರಿಯಿಂದಲೇ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲಾಗಿತ್ತು. ಅಲ್ಲದೆ ಈ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಅಥವಾ ಪ್ರಧಾನ ಕಾರ್ಯದರ್ಶಿಗಳಿಗೆ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್ ಮತ್ತು ಎಂ.ಎಂ. ಶಾಂತನಗೌಡರ್‌ ರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿದೆ. ಕಾನೂನಿನ ಪ್ರಕಾರ ಮನೆಗೆಲಸದವರನ್ನು ನೋಂದಣಿ ಮಾಡುವುದು ಹಾಗೂ ಅವರಿಗೆ ಗುರುತಿನ ಚೀಟಿ ನೀಡುವುದು ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next