Advertisement

ಶಿರ್ವ ಧರ್ಮಗುರು ಫಾ.ಮಹೇಶ್ ಡಿಸೋಜ ಆತ್ಮಹತ್ಯೆ: ನ್ಯಾಯಕ್ಕೆ ಒತ್ತಾಯಿಸಿ ಪ್ರತಿಭಟನೆ

12:23 PM Nov 03, 2019 | sudhir |

ಶಿರ್ವ: ಇಲ್ಲಿನ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು, ಪ್ರಾಂಶುಪಾಲರ ಕೊಠಡಿಯ ಒಳಗಡೆ ಅ. 11 ರಂದು ನೇಣಿಗೆ ಶರಣಾದ ಶಾಲೆಯ ಪ್ರಾಂಶುಪಾಲ ಫಾ| ಮಹೇಶ್‌ ಡಿ ಸೋಜಾ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಕ್ರೈಸ್ತ ಸಮುದಾಯದವರು ಶನಿವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ಫಾ| ಮಹೇಶ್‌ ಆತ್ಮಹತ್ಯೆಗೆ ಶರಣಾಗಿ 20 ದಿನಗಳು ಕಳೆದರೂ ಅವರ ಸಾವಿನ ಹಿಂದಿನ ರಹಸ್ಯ ಬಹಿರಂಗಗೊಂಡಿಲ್ಲ. ಜತೆಗೆ ಅವರ ಸಾವಿನ ಹಿಂದೆ ಯಾರದೋ ಕೈವಾಡ ಇರುವ ಬಗ್ಗೆ ಸಂಶಯ ಮೂಡಿದ್ದು ಚರ್ಚ್‌ನ ವತಿಯಿಂದ ಯಾವುದೇ ಪ್ರಕರಣ ದಾಖಲಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಚರ್ಚಿನ ಗಂಟೆ ಬಾರಿಸಿ ಪ್ರತಿಭಟನೆ
ತುರ್ತು ಸಂದರ್ಭಗಳಲ್ಲಿ ಮಾತ್ರ ಚರ್ಚ್‌ನ ಗಂಟೆ ಬಾರಿಸುವುದಾಗಿದ್ದು ನೆರೆದಿದ್ದ ಸುಮಾರು 1 ಸಾವಿರಕ್ಕೂ ಮಿಕ್ಕಿದ ಜನರು ಆಕ್ರೋಶಿತರಾಗಿ ಚರ್ಚ್‌ನ ಗಂಟೆ ಬಾರಿಸಿ ಫಾ| ಮಹೇಶ್‌ ಡಿ‡ಸೋಜಾ ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯ ಕೋರಿ ಪ್ರತಿಭಟನೆ ನಡೆಸಿದರು. ಚರ್ಚ್‌ಗೆ ಪೂಜೆ ಸಲ್ಲಿಸಲು ಬಂದಿದ್ದ ಭಕ್ತಾಧಿಗಳು ಚರ್ಚ್‌ನ ಧರ್ಮಗುರು ರೆ|ಫಾ|ಡೆನ್ನಿಸ್‌ ಡೇಸಾ ಅವರಲ್ಲಿ ಮಾತನಾಡಲು ಯತ್ನಿಸಿದ್ದು ಆ ವೇಳೆ ಧರ್ಮಗುರುಗಳು ಒಳಗಡೆ ಹೋಗಿದ್ದರಿಂದ ಪ್ರತಿಭಟನಾಕಾರರು ಮತ್ತಷ್ಟು ಆಕ್ರೋಶಗೊಂಡು ಧರ್ಮಗುರುಗಳು ಹೊರಬರುವಂತೆ ಒತ್ತಾಯಿಸಿದರು.

ಪೊಲೀಸ್‌ ಅಧಿಕಾರಿಗಳ ಭೇಟಿ
ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ಭೇಟಿ ನೀಡಿದ್ದು ಪ್ರತಿಭಟನಾಕಾರರೊಡನೆ ಮಾತುಕತೆ ನಡೆಸಿದರು. ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಚರ್ಚ್‌ನ ಧರ್ಮಗುರುಗಳೊಂದಿಗೆ ಮಾತನಾಡಿದ ಬಳಿಕ ಧರ್ಮಗುರುಗಳು ಬಂದು ಸಮುದಾಯದ ಜನರೊಂದಿಗೆ ಮಾತನಾಡಿ ರವಿವಾರ ಬೆಳಿಗ್ಗೆ 10 ಗಂಟೆಗೆ ಬಿಷಪ್‌ ಅವರು ಆಗಮಿಸಿ ಪಾಲನ ಮಂಡಳಿಯ ಸಭೆ ಕರೆದು ಮಾತುಕತೆ ನಡೆಸುವರು ಎಂದು ತಿಳಿಸಿದರು.

ಉಡುಪಿ ಡಿಸಿಐಬಿ ಇನ್ಸ್‌ಪೆಕ್ಟರ್‌ ಸಂಪತ್‌ ಕುಮಾರ್‌,ಶಿರ್ವ ಠಾಣಾಧಿಕಾರಿ ಅಬ್ದುಲ್‌ ಖಾದರ್‌, ಕಾಪು ಪಿಎಸ್‌ಐ ರಾಜಶೇಖರ ಸಗಣೂರು, ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ ,ಪೋಲೀಸ್‌ ಸಿಬಂದಿ ಉಪಸ್ಥಿತರಿದ್ದರು. ಶಿರ್ವ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಸಾವಿನ ಸುತ್ತ ದಿನಕ್ಕೊಂದರಂತೆ ಸುದ್ದಿ ಹರಡುತ್ತಿದ್ದು ಸತ್ಯಾಂಶ ಪೊಲೀಸ್‌ ತನಿಖೆಯಂದಷ್ಟೇ ಹೊರಬರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next