Advertisement

ರೈತನೊಬ್ಬ ಈಗ “ಹೆಲಿಕಾಪ್ಟರ್ ಮಾಲಿಕ…!”

01:26 PM Feb 16, 2021 | Team Udayavani |

ಮಹಾರಾಷ್ಟ್ರ: ನೀವು ಸಾಮನ್ಯವಾಗಿ ಒಬ್ಬ ರೈತ ನೂರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ವಿಚಾರವನ್ನು ಕೇಳಿರುತ್ತೀರಿ. ಅದು ನಿಮಗೆ ವಿಶೇಷ ಎಂದೇನನ್ನಿಸುವುದಿಲ್ಲ. ಆದರೇ, ಇಲ್ಲೊಬ್ಬ ರೈತ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ.

Advertisement

ಹೌದು, ಇಡೀ ವಿಶ್ವವೇ ತನ್ನತ್ತ ಗಮನೆ ಸೆಳೆಯುವ ಹಾಗೆ ಮಾಡಿದ ರೈತ ಯಾರು ಏನು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. ನಾವು ನಿಮಗೆ ತಿಳಿಸುತ್ತಿರುವ ರೈತ ಸಾಮಾನ್ಯ ರೈತನಲ್ಲ. ಈ ರೈತ ಒಬ್ಬ ಹೆಲಿಕಾಪ್ಟರ್ ಮಾಲಿಕ, ಅಂತಂದರೇ ನೀವು ನಂಬಲೇಬೇಕು.

ಓದಿ : ಅಮೇರಿಕಾಕ್ಕೆ ಕಳಂಕವಾಗಿರುವ ಬೃಹತ್ ಕಾರಾಗೃಹ “ಗ್ವಾಂಟನಾಮೊ ಬೇ”  ಶಾಶ್ವತ್ ಬಂದ್ …!?

ಮಹಾರಾಷ್ಟ್ರದ ಭಿವಾಂಡಿಯ ರೈತ ಜನಾರ್ಧನ್ ಭೋಯಿರ್ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡ ಅಸಾಮಾನ್ಯರೆನ್ನಿಸಿಕೊಂಡ ರೈತ.  ರೈತನೊಬ್ಬ ಹೆಲಿಕಾಪ್ಟರ್ ಮಾಲೀಕ ಎಂದರೆ ನಂಬಲಸಾಧ್ಯ. ಆದರೆ ಇದು ಅಪ್ಪಟ ಸತ್ಯ.

ಜನಾರ್ದನ್  ತನ್ನ ಹಾಲು ಮತ್ತು ಅದರ ಉತ್ಪನ್ನಕ್ಕೆ ಸಂಬಂಧಿಸಿದ ವ್ಯವಹಾರಕ್ಕಾಗಿ ಅನೇಕ ಭಾರಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸುತ್ತಿರುತ್ತಾರೆ. ಈ ಕಾರಣದಿಂದ ತನ್ನ ಪ್ರಯಾಣ ಸುಗಮವಾಗಿ ನಡೆಯಲಿ ಎಂಬ ಉದ್ದೇಶದಿಂದ ಜನಾರ್ಧನ್ ಹೆಲಿಕಾಪ್ಟರ್ ಖರೀದಿಸಿದ್ದಾರೆ.

Advertisement

ಡೈರಿ ವ್ಯವಹಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ರೈತ ಜನಾರ್ದನ್ ..! 

ಕೃಷಿ ಮತ್ತು ಹಾಲು ವ್ಯಾಪಾರ ಮಾಡುವ ರೈತ ಜನಾರ್ದನ್ ಭೋಯಿರ್ ಡೈರಿ ವ್ಯವಹಾರಕ್ಕಾಗಿ ಆಗಾಗ್ಗೆ ಪಂಜಾಬ್ , ಗುಜರಾತ್, ಹರಿಯಾಣ, ರಾಜಸ್ಥಾನದಂತಹ ಪ್ರದೇಶಗಳಿಗೆ ಪ್ರಯಣ ಬೆಳೆಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ತನ್ನ ಪ್ರಯಾಣ ಸುಗಮವಾಗಿರಲಿ ಎಂಬ ಕಾರಣದಿಂದಾಗಿ,  30 ಕೋಟಿ ಮೌಲ್ಯದ ಹೆಲಿಕಾಪ್ಟರ್  ಖರೀದಿಸಿದ್ದಾರೆ.

ಮಾರ್ಚ್ 15 ರಂದು ತಲುಪಲಿರುವ ಹೆಲಿಕ್ಯಾಪ್ಟರ್ ! 

ಜನಾರ್ದನ್ ಭೋಯಿರ್  ಅವರು ತಮ್ಮ ಮನೆಯ ಸಮೀಪ ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಇದಲ್ಲದೆ, ತನ್ನ 2.5 ಎಕರೆ ಜಾಗದಲ್ಲಿ ಪೈಲಟ್ ರೂಮ್ , ಟೆಕ್ನಿಷಿಯನ್ ರೂಮ್ ಸಹ ಸಿದ್ಧಪಡಿಸಲಾಗಿದೆ. ಮಾರ್ಚ್ 15 ರಂದು  ಜನಾರ್ಧನ್ ಅವರಿಗೆ ಹೆಲಿಕಾಪ್ಟರ್ ಸಿಗಲಿದೆ.

ಜನಾರ್ಧನ್ ಗೆ ಇದು ಹೇಗೆ ಸಾಧ್ಯವಾಯಿತು..?

ಜನಾರ್ದನ್ ಭೋಯಿರ್ ಕೃಷಿಯ  ಹೊರತಾಗಿ, ರಿಯಲ್ ಎಸ್ಟೇಟ್  ನಡೆಸುತ್ತಾರೆ. ಜನಾರ್ದನ್ ಭೋಯಿರ್ ಸಹ ಅನೇಕ ಗೋದಾಮುಗಳನ್ನು ಹೊಂದಿದ್ದು, ಇದರಿಂದ ಬಾಡಿಗೆ ರೂಪದಲ್ಲಿ ಸಾಕಷ್ಟು ಹಣ ಸಂಪಾದಿಸುತ್ತಾರೆ ಜನಾರ್ಧನ್.

ಓದಿ :  ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ಭಾಗದ ರೈತರ ಹೊಸ ಪ್ರಯೋಗ

Advertisement

Udayavani is now on Telegram. Click here to join our channel and stay updated with the latest news.

Next