Advertisement

NCP 20 ಶಾಸಕರು ಶಿಂಧೆ ಸಂಪರ್ಕದಲ್ಲಿ: ಉದಯ್‌ ಸಾಮಂತ್‌

11:57 PM May 01, 2023 | Team Udayavani |

ಮುಂಬಯಿ: ಉದ್ಧವ್‌ ಠಾಕ್ರೆ ಅವರೊಂದಿ ಗಿನ ಉಳಿದ 13 ಶಾಸಕರು, ಎನ್‌ಸಿಪಿಯ 20 ಶಾಸಕರು ಸಿಎಂ ಏಕನಾಥ್‌ ಶಿಂಧೆ ಅವರೊಂದಿಗೆ ಸಂಪರ್ಕದ ಲ್ಲಿದ್ದು, ರಾಜ್ಯದಲ್ಲಿ ದೊಡ್ಡ ರಾಜ ಕೀಯ ಭೂಕಂಪ ಸಂಭವಿಸಬಹುದು ಎಂದು ಕೈಗಾರಿಕಾ ಸಚಿವ ಉದಯ್‌ ಸಾಮಂತ್‌ ಹೇಳಿದ್ದಾರೆ.

Advertisement

ಎನ್‌ಸಿಪಿಯ 20 ಶಾಸಕರು ಯಾ ರೊಂದಿಗೂ ಸಂಪರ್ಕದಲ್ಲಿಲ್ಲ. ಉದ್ಧವ್‌ ಠಾಕ್ರೆ ಅವರೊಂದಿಗಿನ ಶಾಸಕರ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅಜಿತ್‌ ಪವಾರ್‌ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎನ್‌ಸಿಪಿಯಿಂದಲೇ ಎಂದು ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್‌ ಪಾಟೀಲ್‌ ಹೇಳಿದ್ದಾರೆ.

ಪಾಟೀಲ್‌ ಹೇಳಿಕೆಗೆ ವಿಪಕ್ಷ ನಾಯಕ ಅಜಿತ್‌ ಪವಾರ್‌ ಕೂಡ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಬಾರ್ಸು ಯೋಜನೆಯಲ್ಲಿ ಯಾರೂ ರಾಜಕೀಯ ಮಾಡಬಾರದು. ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಹರಿ ಸಬೇಕು ಎಂದು ಅಜಿತ್‌ ಪವಾರ್‌ ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next