Advertisement

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

10:05 PM Aug 18, 2022 | Team Udayavani |

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಕಪ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್‌ ಜಯ ಗಳಿಸಿದೆ.

Advertisement

ಮಾಯಾಂಕ್‌ ಅಗರ್ವಾಲ್‌ ನಾಯಕತ್ವದ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 9 ವಿಕೆಟಿಗೆ 144 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಮನೀಷ್‌ ಪಾಂಡೆ ನಾಯಕತ್ವದ ಗುಲ್ಬರ್ಗ ತಂಡವು 17.3 ಓವರ್‌ಗಳಲ್ಲಿ 4 ವಿಕೆಟಿಗೆ 150 ರನ್‌ ಗಳಿಸಿ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

ಬೆಂಗಳೂರು ಪರ ಯಾರೂ ಹೇಳಿಕೊಳ್ಳುವಂತಹ ಆಟವಾಡಲಿಲ್ಲ. ಆದರೆ ಮಿಸ್ಟಿಕ್ಸ್‌ ಪರ ದೇವದತ್ತ ಪಡಿಕ್ಕಲ್‌ ಆಕ್ರಮಣಕಾರಿಯಾಗಿ ಆಡಿ 78 ರನ್‌ ಗಳಿಸಿದರು. ಈ ತಂಡದ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಕೆ.ವಿದ್ವತ್‌ 3, ಮನೋಜ್‌ ಬಾಂಡಗೆ 3 ವಿಕೆಟ್‌ ಗಳಿಸಿದರು. ಕುಶಾಲ್‌ ವಾಧ್ವಾನಿ 2 ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next