Advertisement

ಮಹಾಲಿಂಗೇಶ್ವರ ದೇಗುಲ ಪತ್ತನಾಜೆ ಉತ್ಸವ

12:23 PM May 26, 2018 | Team Udayavani |

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪತ್ತನಾಜೆ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಗುರುವಾರ ರಾತ್ರಿ ನಡೆಯಿತು. ಶ್ರೀ ದೇವರ ನಿತ್ಯ ಬಲಿ ಉತ್ಸವವು ಉಡಿಕೆ, ಚೆಂಡೆ, ವಾದ್ಯ ಸುತ್ತುಗಳೊಂದಿಗೆ ನಡೆಯಿತು. ಅನಂತರ ಪಕ್ಕಿ ಉತ್ಸವ, ಪಲ್ಲಕ್ಕಿ ಸೇವೆ ನಡೆಯಿತು. ಬಳಿಕ ನೂರಾರು ಭಕ್ತರು ವಸಂತಪೂಜೆ ಸೇವೆ ನಡೆಸಿದರು.

Advertisement

ದೇವರು ಗರ್ಭಗುಡಿ ಪ್ರವೇಶಿಸಿದ ಬಳಿಕ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಅವರು ಪತ್ತನಾಜೆ ಉತ್ಸವದ ಪ್ರಸಾದವಾಗಿ ಭಕ್ತರಿಗೆ ಫಲವಸ್ತುಗಳನ್ನು ವಿತರಿಸಿದರು. ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂಜೀವ ನಾಯಕ್‌ ಕಲ್ಲೇಗ, ಜಾನು ನಾಯ್ಕ, ರೋಹಿಣಿ ಆಚಾರ್ಯ, ಕರುಣಾಕರ ರೈ, ನಯನಾ ರೈ, ಯು.ಪಿ. ರಾಮಕೃಷ್ಣ, ಕಾರ್ಯ ನಿರ್ವಹಣಾಧಿಕಾರಿ ಜಗದೀಶ್‌ ಎಸ್‌., ವ್ಯವಸ್ಥಾಪಕ ಜಗದೀಶ್‌ ಸಹಿತ ನೂರಾರು ಭಕ್ತರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next