Advertisement

ಮಹಾದೇವ ಭೈರಗೊಂಡ ಶೂಟ್ ಔಟ್ ಪ್ರಕರಣ : ಮತ್ತೆ ಮೂವರ ಬಂಧನ, ಬಂಧಿತರ‌ ಸಂಖ್ಯೆ19ಕ್ಕೆ ಏರಿಕೆ

08:38 PM Nov 12, 2020 | mahesh |

ವಿಜಯಪುರ : ಈ ತಿಂಗಳ 2 ರಂದು ನಗರದ ಹೊರ ವಲಯದಲ್ಲಿ ಮಹಾದೇವ ಭೈರಗೊಂಡ ಹಾಗೂ ಸಂಗಡಿಗರ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣದಲ್ಲಿ ವಿಜಯಪುರ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ.

Advertisement

ಬಂಧಿತರನ್ನು ಮಹಾದೇವ ಭೈರಗೊಂಡನ ಸ್ವಗ್ರಾಮದ 35 ವರ್ಷದ ಸಂಗಪ್ಪ ಗುರುಬಸು ಯಮದೆ, ದೇಗಿನಾಳ ಗ್ರಾಮದ 23 ವರ್ಷದ ಸಂಘರ್ಷಸಂಜಯ ಸೂರ್ಯವಂಶಿ, ವಿಜಯಪುರ ಜಲನಗರ ನಿವಾಸಿ ಚೇತನ ಚನ್ನಪ್ಪ ಶಿರಶ್ಯಾಡ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಏರ್‍ಗನ್, ಎರಡು ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆದುದಾಗಿ ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.

ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ರಚನೆಯಾಗಿರುವ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದ ತನಿಖಾ ತಂಡದ ಕಾರ್ಯಕ್ಕೆ ಎಸ್ಪಿ ಅನುಪಮ ಅಗರವಾಲ್ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next