Advertisement

ಎಐಎಡಿಎಂಕೆ ಶಾಸಕರಿಬ್ಬರ ಪತ್ತೆಯ ಹೆಬಿಯಸ್‌ ಕಾರ್ಪಸ್‌ ಅರ್ಜಿ ವಜಾ

03:48 PM Feb 16, 2017 | Team Udayavani |

ಚೆನ್ನೈ : ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನಟರಾಜನ್‌ ಅವರನ್ನು ಬೆಂಬಲಿಸುವ ಶಾಸಕರಿರುವ ರೆಸಾರ್ಟ್‌ನಲ್ಲಿ ಕಾನೂನುಬಾಹಿರ ಬಂಧನದಲ್ಲಿರುವ ಇಬ್ಬರು ಎಐಎಡಿಎಂಕೆ ಶಾಸಕರನ್ನು ಪತ್ತೆ ಹಚ್ಚಿಕೊಡುವಂತೆ ಕೋರುವ ಹೆಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಇಂದು ವಜಾ ಮಾಡಿದೆ.

Advertisement

“ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲದಿರುವುದನ್ನು ನಾವು ಗಮನಿಸಿದ್ದೇವೆ’ ಎಂದು ಹೇಳಿರುವ ಹೈಕೋರ್ಟ್‌ ಪೀಠ, ‘ಕೂವತ್ತೂರಿನಲ್ಲಿರುವ ರೆಸಾರ್ಟ್‌ಗೆ ವೈಯಕ್ತಿಕವಾಗಿ ಭೇಟಿಕೊಟ್ಟು ತಪಾಸಣೆ ನಡೆಸಲು ಎಮಿಕಸ್‌ ಕ್ಯೂರಿ (ಕೋರ್ಟ್‌ ಸ್ನೇಹಿತ) ನೇಮಿಸಬೇಕೆಂಬ’ ಕೋರಿಕೆಯನ್ನು ಕೂಡ ತಿರಸ್ಕರಿಸಿದೆ.

ಕೃಷ್ಣರಾಯಪುರಂ ಮತ್ತು ಕುನ್ನಂ ವಿಧಾನಸಭಾ ಕ್ಷೇತ್ರಗಳ ಅನುಕ್ರಮ ಶಾಸಕರಾಗಿರುವ ಗೀತಾ ಮತ್ತು ಆರ್‌ ಟಿ ರಾಮಚಂದ್ರನ್‌ ಅವರನ್ನು ಹಾಜರುಪಡಿಸುವಂತೆ ಮತ್ತು ಅವರನ್ನು ಬಂಧಮುಕ್ತಗೊಳಿಸಬೇಕು ಎಂದು ಕೋರುವ ಹೆಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಜಸ್ಟಿಸ್‌ ಎಂ ಜಯಚಂದ್‌° ಮತ್ತು ಜಸ್ಟಿಸ್‌ ಟಿ ಮತಿವನನ್‌ ಅವರನ್ನು ಒಳಗೊಂಡ ಹೈಕೋರ್ಟ್‌ ಪೀಠ ವಜಾ ಮಾಡಿತು. 

Advertisement

Udayavani is now on Telegram. Click here to join our channel and stay updated with the latest news.

Next