Advertisement

Madikeri; ಅರಣ್ಯ ರಕ್ಷಕರ ಬೆನ್ನಟ್ಟಿದ ಆನೆ!

11:23 PM Feb 10, 2024 | Team Udayavani |

ಮಡಿಕೇರಿ: ಮದವೇರಿದ ಕಾಡಾನೆ ಯೊಂದು ಅರಣ್ಯ ರಕ್ಷಕರನ್ನು ಬೆನ್ನಟ್ಟಿದ್ದಲ್ಲದೆ ಬೈಕೊಂದನ್ನು ಜಖಂಗೊಳಿಸಿದ ಘಟನೆ ಸೋಮವಾರ ಪೇಟೆಯ ಕೋವರ್‌ ಕೊಲ್ಲಿ ಕಾಜೂರು ಅರಣ್ಯ ಭಾಗದಲ್ಲಿ ನಡೆದಿದೆ.

Advertisement

ಕಾಫಿ ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟಿರುವ ಬಗ್ಗೆ ದೂರು ಬಂದ ಹಿನ್ನೆಲೆ ಅರಣ್ಯ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಕಾಡಾನೆ ಏಕಾಏಕಿ ದಾಳಿ ಮಾಡಿತು.

ಸಿಬಂದಿಗಳಾದ ಹರ್ಷಿತ್‌, ಶ್ರೀಕಾಂತ್‌, ದರ್ಶನ್‌, ವಿನೋದ್‌ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆನೆಯು ಬೈಕನ್ನು ತುಳಿದು ಹಾನಿಗೊಳಿಸಿತು. ಅಲ್ಲದೆ ಟಾಟಾ ಎಸ್ಟೇಟ್‌ನ ಗೇಟನ್ನು ಮುರಿದು ಹಾಕಿದೆ. ಗ್ರಾಮದಲ್ಲಿ ಆತಂಕದ ವಾತಾವರಣ ನೆಲೆಸಿದೆ. ಅರಣ್ಯ ಇಲಾಖೆ ಸಿಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next