Advertisement

ಸಮುದ್ರದ ಅಲೆಗೆ ಸಿಲುಕಿ ಮಡಿಕೇರಿ ಯುವಕನ ಸಾವು

12:52 AM Jan 15, 2023 | Team Udayavani |

ಮಡಿಕೇರಿ: ಶಬರಿಮಲೆಗೆ ತೆರಳಿದ್ದ ಮಡಿಕೇರಿ ನಗರದ ಯುವಕನೊಬ್ಬ ಮರಳುವ ಸಂದರ್ಭ ಸಮುದ್ರದಲೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರು ಬೀಚ್‌ ನಲ್ಲಿ ನಡೆದಿದೆ.

Advertisement

ನಗರದ ಸುದರ್ಶನ ಬಡಾವಣೆ ನಿವಾಸಿ ಲೋಕೇಶ್‌ ಅವರ ಪುತ್ರ ಶಶಾಂಕ್‌ (25) ಮೃತ ಯುವಕ. ಶಬರಿಮಲೆಯಿಂದ ಮರಳುವಾಗ ಯುವಕರ ತಂಡ ಕೇರಳದ ಕಣ್ಣೂರು ಬೀಚ್‌ಗೆ ಭೇಟಿ ನೀಡಿತ್ತು. ಈ ಸಂದರ್ಭ ಇವರು ಅಲೆಗಳಿಗೆ ಸಿಲುಕಿದರು ಎನ್ನ‌ಲಾಗಿದೆ. ರಕ್ಷಿಸುವ ಪ್ರಯತ್ನ ಮಾಡಲಾಯಿತಾದರೂ ಶಶಾಂಕ್‌ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ. ತಂದೆ, ತಾಯಿ ಹಾಗೂ ಸಹೋದರಿಯನ್ನು ಅವರು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next