ಮಡಿಕೇರಿ: ಆಟೋರಿಕ್ಷಾವೊಂದು ಅಗ್ನಿಗಾಹುತಿಯಾದ ಘಟನೆ ಸುಂಟಿಕೊಪ್ಪ ಸಮೀಪದ ಅಂದಗೋವೆಯಲ್ಲಿ ನಡೆದಿದೆ.
Advertisement
ಅಂದಗೋವೆ ನಿವಾಸಿ ಶಿವರಾಜ್ ಮಂಗಳವಾರ ರಾತ್ರಿ ಆಟೋರಿûಾದಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ತಾವು ಕುಳಿತ ಆಸನ ಬಿಸಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿವರಾಜ್ ಆಟೋ ನಿಲ್ಲಿಸಿ ಹೊರ ಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಸ್ವಲ್ಪಹೊತ್ತಿನಲ್ಲಿ ಬೆಂಕಿ ವ್ಯಾಪಿಸಿ ಆಟೋರಿಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.