Advertisement

ಮ.ಪ್ರದೇಶ: ಚಿರತೆಯೊಂದಿಗೆ ಹೋರಾಡಿ ಮಗನನ್ನು ರಕ್ಷಣೆ ಮಾಡಿದ ತಾಯಿ

12:20 AM Dec 02, 2021 | Team Udayavani |

ಭೋಪಾಲ: ಮಗನನ್ನು ತನ್ನ ಕಣ್ಣೆದುರೇ ಹೊತ್ತೂಯ್ದ ಚಿರತೆಯೊಂದಿಗೆ ಹೋರಾಡಿ, ತಾಯಿಯು ಮಗನನ್ನು ರಕ್ಷಿಸಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Advertisement

ಸಿಧಿ ಜಿಲ್ಲೆಯ ಬುಡಕಟ್ಟು ಮಹಿಳೆ ಕಿರಣ, ರವಿವಾರ ರಾತ್ರಿ ತನ್ನ ಮೂರು ಮಕ್ಕಳೊಂದಿಗೆ ಮನೆಯ ಹೊರಗೆ ಬೆಂಕಿಯಿಂದ ಚಳಿ ಕಾಯಿಸುತ್ತ ಕುಳಿತಿದ್ದಳು.

ಈ ವೇಳೆ ಎಗರಿದ ಚಿರತೆಯು ಅಲ್ಲಿದ್ದ 6 ವರ್ಷದ ಬಾಲಕನನ್ನು ಹೊತ್ತೂಯ್ದಿದೆ. ತತ್‌ಕ್ಷಣ ಎಚ್ಚೆತ್ತುಕೊಂಡ ಕಿರಣ, ಇನ್ನಿಬ್ಬರು ಮಕ್ಕಳನ್ನು ಮನೆಯೊಳಗೆ ಕಳಿಸಿ, ತಾನು ಕಾಡತ್ತ ಓಡಿದ್ದಾಳೆ.

ಚಿರತೆಯೊಂದಿಗೆ ಹೋರಾಡಿ ಮಗನನ್ನು ಮನೆಗೆ ಕರೆತಂದಿದ್ದಾಳೆ. ಘಟನೆಯಲ್ಲಿ ತಾಯಿ ಮಗನಿಗಿಬ್ಬರಿಗೂ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ:ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

Advertisement

ಕಿರಣಳ ಸಾಹಸಕ್ಕೆ ಸಿಎಂ ಶಿವರಾಜ್‌ ಸಿಂಗ್‌ ಚೌಹಾನ್‌ ಸೇರಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next