Advertisement

Madhya Pradesh: ಸವಾಯ್‌ ಮಾಧೋಪುರದಲ್ಲಿ ಜಯ ಯಾರಿಗೆ?

11:28 PM Nov 17, 2023 | Team Udayavani |

ಮಧ್ಯಪ್ರದೇಶದ ಮತದಾನ ಮುಕ್ತಾಯವಾಗುತ್ತಿರುವಂತೆಯೇ ರಾಜಸ್ಥಾನದಲ್ಲಿ ನ.25ರಂದು ನಡೆಯಲಿರುವ ಮತದಾನಕ್ಕೆ ಪ್ರಚಾರ ಬಿರುಸಾಗಿಯೇ ಮುಂದುವರಿದಿದೆ. ಮರುಭೂಮಿ ರಾಜ್ಯದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಸವಾಯ್‌ ಮಾಧೋಪುರ ದಲ್ಲಿ ಯಾವುದೇ ಅಭ್ಯರ್ಥಿ ಗೆಲ್ಲಬೇಕಾದರೆ ಜಾತಿ ಸಮೀಕರಣದ ಮೂಲಕವೇ ಆಗಬೇಕು. ಬಿಜೆಪಿಯ ರಾಜ್ಯಸಭಾ ಸದಸ್ಯ ಕಿರೋಡಿ ಲಾಲ್‌ ಮೀನಾ, ಕಾಂಗ್ರೆಸ್‌ನ ಹಾಲಿ ಶಾಸಕ ದಿನೇಶ್‌ ಅಬ್ರಾರ್‌ ಜತೆಗೆ ಟಿಕೆಟ್‌ ಕೊಡಲಿಲ್ಲ ಎಂದು ಬಿಜೆಪಿಯ ಬಂಡಾಯ ಅಭ್ಯರ್ಥಿ ಅಶಾ ಮೀನಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಮೀನಾ, ಮುಸ್ಲಿಂ, ಗುಜ್ಜರ್‌ ಸಮುದಾಯದವರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಮೀನಾ ಸಮುದಾಯದವರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಕಿರೋಡಿ ಲಾಲ್‌ ಮೀನಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯ ಈ ಪ್ರಯೋಗ ಸಫ‌ಲವಾಗಲಿದೆಯೋ ಇಲ್ಲವೋ ಎನ್ನುವುದನ್ನು ಡಿ.3ರ ಫ‌ಲಿತಾಂಶದ ದಿನ ಗೊತ್ತಾಗಲಿದೆ.

Advertisement

ಕಾಂಗ್ರೆಸ್‌ ಶಾಸಕ ಅಬ್ರಾರ್‌ ಅವರು 2020ರಲ್ಲಿ ಶಾಸಕ ಸಚಿನ್‌ ಪೈಲಟ್‌ಗೆ ಬೆಂಬಲ ನೀಡದೇ ಇದ್ದದ್ದು ಗುಜ್ಜರ್‌ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಆ ಸಮುದಾಯ ಕಾಂಗ್ರೆಸ್‌ ವಿರುದ್ಧ ಮತ ಹಾಕುತ್ತದೆಯೋ ಎಂಬ ಜಿಜ್ಞಾಸೆ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿ ಕಿರೋಡಿ ಲಾಲ್‌ ಮೀನಾ ಕ್ಷೇತ್ರದಲ್ಲಿ ಸತತವಾಗಿ ಪ್ರವಾಸ ಮಾಡಿದ್ದಾರೆ ಮತ್ತು ಅಶೋಕ್‌ ಗೆಹ್ಲೋಟ್‌ ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ. ಸಿಎಂ ಗೆಹ್ಲೋಟ್‌ ಅವರ ಕುತಂತ್ರದಿಂದಲೇ ಬಿಜೆಪಿಯ ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ ಎನ್ನುವುದು ಮೀನಾ ಅವರ ವಾದ.

Advertisement

Udayavani is now on Telegram. Click here to join our channel and stay updated with the latest news.

Next