Advertisement

ಹಲವರ ಪ್ರಾಣ ಉಳಿಸಿದ ಚಾಲಕ

07:30 AM Mar 27, 2018 | Team Udayavani |

ಮಧ್ಯಪ್ರದೇಶ: ಪೆಟ್ರೋಲ್‌ ಟ್ಯಾಂಕರ್‌ ಚಾಲಕನ‌ ಸಮಯ ಪ್ರಜ್ಞೆಯಿಂದ ಹತ್ತಾರು ಜನರ ಜೀವ ಉಳಿದ ಘಟನೆಯೊಂದು ನರಸಿಂಗ್‌ಪುರದಲ್ಲಿ ನಡೆದಿದೆ. ಇಂಧನವನ್ನು ಪೆಟ್ರೋಲ್‌ ಬಂಕ್‌ಗೆ ತುಂಬಿಸುತ್ತಿದ್ದಾಗ ಟ್ಯಾಂಕರ್‌ನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಎಚ್ಚೆತ್ತ ಚಾಲಕ ಸಾಜಿದ್‌, ಪ್ರಾಣ ಲೆಕ್ಕಿಸದೇ ಹೊತ್ತಿ ಉರಿಯುತ್ತಿದ್ದ ಟ್ಯಾಂಕರನ್ನು  ಬಂಕ್‌ನಿಂದ ದೂರಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ವಾಹನ ಸವಾರರೂ ತಮ್ಮ ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಅಂಗಡಿಗಳಲ್ಲಿ ಅವಿತುಕೊಂಡಿದ್ದಾರೆ. ಬೆಂಕಿ ಹೊತ್ತಿದ್ದ ಟ್ಯಾಂಕರ್‌, ಬಂಕ್‌ನಲ್ಲೇ ಇದ್ದಿದ್ದರೆ ಅಲ್ಲಿ ಶೇಖರಣೆಯಾಗಿದ್ದ ಇಂಧನವೂ ಹೊತ್ತಿಕೊಂಡು ಅನಾಹುತವೇ ಸಂಭವಿಸುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next