Advertisement

ಸತ್ಯ ಹೇಳಿದ ಮೊದಲಿಗ ಮಾಧುಸ್ವಾಮಿ: ಆಡಳಿತ ಪಕ್ಷದ ಕಾಲೆಳೆದ ಸಿದ್ದರಾಮಯ್ಯ

09:01 PM Sep 13, 2022 | Team Udayavani |

ವಿಧಾನಸಭೆ: “ಈ ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ’ ಎಂದು ಹೇಳಿದ ಸಚಿವ ಜೆ.ಸಿ. ಮಾಧುಸ್ವಾಮಿ “ಸತ್ಯ ಹೇಳಿದವರಲ್ಲಿ ಮೊದಲಿಗರು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದ ಕಾಲೆಳೆದ ಪ್ರಸಂಗ ನಡೆಯಿತು.

Advertisement

ಪ್ರವಾಹದ ಕುರಿತು ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ, ವಿರೋಧ ಪಕ್ಷದ ನಾಯಕರು ಸತ್ಯ ಹೇಳಬೇಕು, ಏನೇನೂ ಸುಳ್ಳು ಹೇಳಬಾರದು. ಅವರನ್ನು ಹೇಳಿದ್ದನ್ನೆಲ್ಲ ಕೇಳಿಕೊಂಡು ಆಡಳಿತ ಪಕ್ಷ ಸುಮ್ಮನೆ ಕೂರುವುದು ಹೇಗೆ ಎಂದು ಸಚಿವ ಆರ್‌. ಅಶೋಕ್‌ ಹೇಳಿದರು.

ಅದಕ್ಕೆ, ನಾನು ಸತ್ಯ ಹೇಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಸರ್ಕಾರವೂ ಸಹ ಸತ್ಯ ಹೇಳುತ್ತಿದೆ ಎಂದು ಅಶೋಕ್‌ ತಿಳಿಸಿದರು.

ಹೌದು..ಮಾಧುಸ್ವಾಮಿಯವರು ಸತ್ಯವನ್ನೇ ಹೇಳಿದ್ದಾರೆ. ಈ ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು. ಸತ್ಯ ಹೇಳಿದವರಲ್ಲಿ ಮಾಧುಸ್ವಾಮಿ ಮೊದಲಿಗರು ಎಂದು ಕಾಲೆಳೆದರು.

ನೀವು ಯಾವತ್ತೂ ಸುಳ್ಳು ಹೇಳಿಲ್ವಾ ಎಂದು ಅಶೋಕ್‌ ಪ್ರಶ್ನಿಸಿದರು. ನಾನು ನೂರಕ್ಕೆ ನೂರು ಸತ್ಯ ಹೇಳುತ್ತೇನೆ ಎಂದು ಹೇಳಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಸುಳ್ಳು ಹೇಳುವ ಪ್ರಸಂಗಗಳು ಎದುರಾಗುತ್ತವೆ. ಆದರೆ, ಯಾರಿಗಾದರೂ ಒಳ್ಳೆಯದು ಮಾಡಲು, ಅನುಕೂಲವಾಗಲು ಸುಳ್ಳು ಹೇಳುತ್ತೇನೆಯೇ ಹೊರತು, ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next