Advertisement

ಕಾಂಗ್ರೆಸ್‌ಗೆ ಹೋಗುವ ದುಃಸ್ಥಿತಿ ನನಗೇನು ಬಂದಿದೆ?: ಮಾಧುಸ್ವಾಮಿ

08:45 PM Jul 02, 2023 | Team Udayavani |

ಚಿಕ್ಕನಾಯಕನಹಳ್ಳಿ: ಬಿಜೆಪಿ ನನ್ನನ್ನು ಅತಿ ಹೆಚ್ಚು ಗೌರವದಿಂದ ನಡೆಸಿಕೊಳ್ಳುತ್ತಿದೆ. ಆ ಪಕ್ಷದ ಋಣ ತೀರಿಸುವ ಜವಾಬ್ದಾರಿ ನನಗಿದೆ. ಗೆಲುವು ಸೋಲು ಮುಖ್ಯವಲ್ಲ. ತಿಂದ ಅನ್ನದ ಋಣ ತೀರಿಸಿ ಹೋಗಬೇಕು. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Advertisement

ಪಟ್ಟಣದ ನವೋದಯ ಕಾಲೇಜು ಆವರಣದಲ್ಲಿ ಚುನಾವಣೆ ಬಳಿಕ ಮೊದಲ ಬಾರಿಗೆ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಸೋತಿರುವುದಕ್ಕೆ ಪಕ್ಷ ಬಿಡುವುದು ಧರ್ಮವಲ್ಲ. ನಾನು ಕೇಳದೆಯೇ ಬಿಜೆಪಿ ಮಂತ್ರಿ ಸ್ಥಾನ ಕೊಟ್ಟಿದೆ. ನಾನು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಸಣ್ಣ ಆಲೋಚನೆಯನ್ನೂ ಮಾಡಿಲ್ಲ. ಕೆಲವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಹೋಗುವ ದುಃಸ್ಥಿತಿ ನನಗೇನಿದೆ? ಒಂದು ವೇಳೆ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾದರೆ ಯೋಚಿಸೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next