Advertisement

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಾಮುಕ ಶಿಕ್ಷಕ ಕರ್ತವ್ಯದಿಂದ ಅಮಾನತು

08:17 PM Mar 27, 2023 | Team Udayavani |

ಮಧುಗಿರಿ; ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಾಮುಕ ಶಿಕ್ಷಕ ಮಂಜುನಾಥ್ ಹಾಗೂ ಕರ್ತವ್ಯ ಲೋಪದ ಆಧಾರದ ಮೇಲೆ ಮುಖ್ಯ ಶಿಕ್ಷಕ ನಟರಾಜ್ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಬಿಇಓ ತಿಮ್ಮರಾಜು ತಿಳಿಸಿದ್ದಾರೆ.

Advertisement

ತಾಲೂಕಿನ ದೊಡ್ಡೇರಿ ಹೋಬಳಿಯ ಬೋರನಗುಂಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕ ಮಂಜುನಾಥ್ ಹಾಗೂ ಮುಖ್ಯ ಶಿಕ್ಷಕ ನಟರಾಜ್ ಅಮಾನತ್ತಾಗಿ ಪೊಲೀಸರ ಅತಿಥಿಯಾಗಿದ್ದಾರೆ.

ಶಿಕ್ಷಕ ಮಂಜುನಾಥ್ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಅಭ್ಯಾಸ ಮಾಡುವ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ದೂರು ಬಂದಿದೆ. ಶಾಲೆಯ ಬಳಿ ಗ್ರಾಮಸ್ಥರು, ಪೋಷಕರು ಜಮಾಯಿಸಿ ಶಿಕ್ಷಕರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಮುಂದುವರೆದು ಮಾತನಾಡಿದ ಗ್ರಾಮಸ್ಥರು ಇವರನ್ನು ಅಮಾನತ್ತು ಮಾಡಿ ಬೇರೆ ಕಡೆ ಕಳಿಸಿದರೂ ಇದೇ ಕೆಲಸ ಮಾಡುತ್ತಾರೆ. ಹಾಗೆ ಆಗಬಾರದು. ಸಾಯುವವರೆಗೂ ಜೈಲಲ್ಲಿ ಮುದ್ದೆ ಮುರಿಯಬೇಕು ಹಾಗೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಶಿಕ್ಷಕರನ್ನು ಅಮಾನತ್ತು ಮಾಡಿದ್ದು, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಬಿಇಓ ತಿಮ್ಮರಾಜು ಘೋಷಿಸಿದರು. ಇಂತಹ ಕೆಲಸ ಯಾರೂ ಮಾಡಿದರೂ ಅಕ್ಷಮ್ಯ. ಬೆಳೆಯುವ ಮಕ್ಕಳಿಗೆ ಇಂತಹ ಘಟನೆ ದುಷ್ಪರಿಣಾಮ ಬೀರಲಿದ್ದು, ಇವರಿಗೆ ತಕ್ಕ ಶಿಕ್ಷೆಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

Advertisement

ಇದನ್ನೂ ಓದಿ: ಕೈಲಾಶ್ ವಸತಿ ಸಮುಚ್ಚಯ: ಗುಣನಾಥನ ಮೋಕ್‌ ಅಪ್ ಫ್ಲ್ಯಾಟ್ ಗೆ ಅಭೂತಪೂರ್ವ ಸ್ಪಂದನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next