Advertisement

ಮಧುಗಿರಿ : ಅರುಂಧತಿ ಸಿನಿಮಾ ನೋಡಿ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಯುವಕ

12:45 PM Aug 11, 2022 | Team Udayavani |

ಮಧುಗಿರಿ : ಅರುಂಧತಿ ಸಿನಿಮಾವನ್ನು ಹತ್ತಾರು ಬಾರಿ ನೋಡಿದ್ದ ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ನರಳಾಡುತ್ತಿದ್ದು ಕರವೇ ತಾಲೂಕು ಅಧ್ಯಕ್ಷ ಶಿವಕುಮಾರ್ ನೆರವಿನಿಂದ ಆಸ್ಪತ್ರೆ ಸೇರಿ ಬದುಕುಳಿದಿದ್ದಾನೆ.

Advertisement

ತಾಲೂಕಿನ ಗಿಡೈಯ್ಯನಪಾಳ್ಯದ ಸಿದ್ದಪ್ಪ ನವರ ಪುತ್ರ ರೇಣುಕಾ ಪ್ರಸಾದ್ (22) ಎಂಬ ಯುವಕನೇ ಈ ಕೆಲಸ ಮಾಡಿಕೊಂಡಿರುವುದು.

20 ಲೀ. ಪೆಟ್ರೋಲ್ ತಂದಿದ್ದ ಈತ ಅದನ್ನು ರೇಷ್ಮೆ ಶೆಡ್ ನಲ್ಲಿರಿಸಿ 1 ಲೀ. ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಬೆಂಕಿಯ ಉರಿ ತಾಳಲಾರದೆ ರಸ್ತೆಗೆ ಓಡಿ ಬಂದು ಕಿರುಚಾರಡುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ತಾಲೂಕು ಕರವೇ ಅಧ್ಯಕ್ಷ ಶಿವಕುಮಾರ್ ಹಾಗೂ ಸ್ನೇಹಿತರು ತಕ್ಷಣ ತುರ್ತುವಾಹನಕ್ಕೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.

ನಡೆದ ಘಟನೆ ಕುರಿತು ಪೋಷಕರಿಗೆ ವಿಷಯ ತಿಳಿಸಲು ಸ್ಥಳಕ್ಕೆ ಬಂದ ವೇಳೆ ಮಾತನಾಡಿದ ಯುವಕನ ತಂದೆ ಸಿದ್ದಪ್ಪನವರು ಎಸ್ ಎಸ್ ಎಲ್ ಸಿ ಯಲ್ಲಿ ಟಾಪರ್ ಇದ್ದವನನ್ನು ತುಮಕೂರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳಿಸಿದ್ದೆ. ಅಲ್ಲಿ ಹಾಸ್ಟೆಲ್ ನಲ್ಲಿದ್ದುಕೊಂಡು ಜೀವನ ಹಾಳು ಮಾಡಿಕೊಂಡಿದ್ದಾನೆ ಎಂದಿದ್ದಾರೆ. ಆ ಅರುಂದತಿ ಸಿನಿಮಾ ನೋಡಬೇಡ ಅಂತ ಹೇಳಿದರೂ ನೋಡಿ ಹೀಗೆ ಮಾಡಿಕೊಂಡಿಯಲ್ಲಾ ಎಂದು ತಂದೆ ಅಲವತ್ತುಕೊಂಡಿದ್ದಾರೆ…

ಯುವಕನನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ : ಮದುವೆಗೆ ಬರುವಂತೆ ಅಲಂಕರಿಸಿದ ಕಾರುಗಳಲ್ಲಿ ಬಂದು ಐಟಿ ದಾಳಿ; 390 ಕೋಟಿ ರೂ. ಪತ್ತೆ!

Advertisement

Udayavani is now on Telegram. Click here to join our channel and stay updated with the latest news.

Next