Advertisement

ಮಧುಗಿರಿ: ಜಯಮಂಗಲಿ ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

02:08 PM Oct 07, 2022 | Team Udayavani |

ಮಧುಗಿರಿ: ದ್ವಿಚಕ್ರ ವಾಹನ ತೊಳೆಯಲು ನದಿಗೆ ಇಳಿದಿದ್ದ ಬಾಲಕ ನೀರು ಪಾಲಾದ ಘಟನೆ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಮುದ್ದೇನಹಳ್ಳಿಯಲ್ಲಿ ನಡೆದಿದೆ.

Advertisement

ಮುದ್ದೇನಹಳ್ಳಿ ನಿವಾಸಿ ಶಂಕರಪ್ಪನ ಮಗನಾದ ನಾಗಚೇತನ (14) ಮೃತಪಟ್ಟ ಬಾಲಕ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ8 ನೇ ತರಗತಿಯಲ್ಲಿ ಓದುತ್ತಿದ್ದ ಈತ ಶಾಲೆಗೆ ರಜೆಯಿದ್ದ ಕಾರಣ ಗ್ರಾಮದ ಬಳಿ ಹರಿಯುತ್ತಿದ್ದ ಜಯಮಂಗಳಿ ನದಿಯಲ್ಲಿ ತನ್ನ ದ್ವಿಚಕ್ರ ವಾಹನ ತೊಳೆಯಲು ನದಿಗೆ ಇಳಿದಿದ್ದ ಎನ್ನಲಾಗಿದೆ. ಈತ ನೀರಿನ ರಭಸಕ್ಕೆ ಆಯ ತಪ್ಪಿ ನದಿಗೆ ಬಿದ್ದಿದ್ದು, ಉಸಿರುಗಟ್ಟಿದ್ದ ಆತನನ್ನು ತಕ್ಷಣ ಗ್ರಾಮಸ್ಥರು ಕಾಪಾಡಿ, ಪ್ರಥಮ ಚಿಕಿತ್ಸೆಗೆ ಹಿಂದೂಪುರಕ್ಕೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next