Advertisement

ಮಧುಗಿರಿ: ಈಜಲು ಹೋಗಿ ದೊಣೆಯಲ್ಲಿ ಮುಳುಗಿ ಯುವಕ ಸಾವು

06:53 PM Oct 08, 2022 | Team Udayavani |

ಮಧುಗಿರಿ: ಈಜು ಬಾರದಿದ್ದರೂ ಈಜಲು ಹೋಗಿದ್ದ ಯುವಕ ನೀರುಪಾಲಾಗಿ ಮೃತಪಟ್ಟ ಘಟನೆ ನಡೆದಿದೆ.

Advertisement

ತಾಲೂಕಿನ ಕಸಬಾ ಮೀನಗೊಂದಿ ರಂಗನಾಥ ಸ್ವಾಮಿ ಬೆಟ್ಟದ ದೊಣೆ ದೊಣೆ (ಬೆಟ್ಟದ ಮೇಲಿರುವ ಸ್ವಾಭಾವಿಕ ಹೊಂಡ)ಯಲ್ಲಿ ಮುಳುಗಿ ಮೃತಪಟ್ಟಿದ್ದು, ಈತ ಬೆಂಗಳೂರು ಮೂಲದ ಬಲರಾಮ್ ರಾಜು (25) ಎಂದು ಗುರುತಿಸಲಾಗಿದೆ. ಈತ ಕುಟುಂಬ ಸಮೇತ ತನ್ನ ಅಕ್ಕನ ಮದುವೆಯ ಆಮಂತ್ರಣ ಪತ್ರಿಕೆಯೊಂದಿಗೆ ಶ್ರೀ ರಂಗನಾಥ ಸ್ವಾಮಿಯ ದರ್ಶನಕ್ಕೆ ಬಂದಿದ್ದರು.

ಈಜು ಬಾರದಿದ್ದರೂ ನೀರಿಗೆ ಇಳಿದಿದ್ದ ಈತ ಮೆಟ್ಟಿಲುಗಳ ಮೇಲೆ ಕಾಲಿಡುವಾಗ ಜಾರಿ ದೊಣೆಯಲ್ಲಿ ಬಿದ್ದಿದ್ದಾನೆ. ಕಾಪಾಡಲು ಈಜು ಬಾರದ ಸಹೋದರ ಕೂಡ ಇಳಿದಿದ್ದು ರಕ್ಷಿಸಲು ಸಾಧ್ಯವಾಗಲಿಲ್ಲ. ನಂತರ ದೊಣೆಯ ಮಧ್ಯಭಾಗಕ್ಕೆ ಹೋಗಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಘಟನೆಯನ್ನು ಕಣ್ಣಮುಂದೆಯೇ ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.‌ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳ ನೆರವಿಂದ ಮೃತದೇಹವನ್ನು ಹೊರತಗೆಯಲಾಯಿತು. ಪ್ರಕರಣ ಮಧುಗಿರಿ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next