Advertisement

ತಿಪ್ಪೆ ಗುಂಡಿ‌‌ ಕಸದಲ್ಲೂ ಬಿಜೆಪಿ ದುಡ್ದು ಹೊಡೆಯುತ್ತಿದೆ: ಮಧು ಬಂಗಾರಪ್ಪ

08:13 PM Dec 05, 2021 | Team Udayavani |

ಶಿರಸಿ: ಗ್ರಾಮ‌ ಪಂಚಾಯ್ತಿಗಳ‌ ಮೂಲಕ ತಿಪ್ಪೆಗುಂಡಿಗೆ ಹಾಕುವ ಕಸದಲ್ಲೂ ಹಣ ಹೊಡೆಯುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದು‌ ಕಾಂಗ್ರೆಸ್ ‌ನಾಯಕ ಮಧು ಬಂಗಾರಪ್ಪ ಆರೋಪಿಸಿದರು.

Advertisement

ರವಿವಾರ ಅವರು ಚನ್ನಾಪುರ‌ ಕೆರೆ ಸಮೀಪದಲ್ಲಿ ‌ಭೀಮಣ್ಣ‌ ನಾಯ್ಕ ಅವರ‌ ಪರವಾಗಿ‌ ಮಾತನಾಡಿ, ಗ್ರಾಮ ಪಂಚಾಯತ್ ಹಣದಲ್ಲಿ‌ ಬಿಜೆಪಿ ಪರ್ಸಂಟೇಜ್ ಹೊಡೆಯುತ್ತಿದೆ.‌ ಅದಕ್ಕಾಗಿ ಕಸದಲ್ಲೂ ಹಣ ಮಾಡಲು‌ ಹೊರಟಿದೆ ಎಂದರು.

ಈಗಿನ ಸರಕಾರ‌ ಒಂದೇ ಒಂದು ಮನೆ ಕೊಟ್ಟಿಲ್ಲ. ದೇಶ, ರಾಜ್ಯದಲ್ಲಿ‌ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂಬ ವಾತಾವರಣ ಇದೆ ಎಂದರು.

ಬಿಜೆಪಿ ಮತ ಕೇಳುವ ನೈತಿಕ‌ ಹಕ್ಕಿಲ್ಲ ಎಂದ ಅವರು, ಬಂಗಾರಪ್ಪ ಅವರು ಇಂದು ಇಲ್ಲದೇ ಇರಬಹುದು. ಆದರೆ, ಅವರ ಕೊಡುಗೆಗಳು ರೈತರಿಗೆ, ಬಡವರಿಗೆ ‌ನೆರವಾಗಿದೆ. ಸಿದ್ದರಾಮಯ್ಯ ಅವರು‌ ಹಸಿದ ಹೊಟ್ಟೆಗೆ ಅನ್ನ ಕೊಟ್ಟವರು ಎಂದರು.

ಧರ್ಮ ಜಾತಿಯ ಹೆಸರಿನಲ್ಲಿ ಬಿಜೆಪಿ ಒಡೆದು ಆಳುತ್ತಿದೆ. ಹಿಂದೆ ಬ್ರಿಟೀಷ್ ಮಾಡಿದ್ದು ಈಗ ಬಿಜೆಪಿ‌ ಮಾಡುತ್ತಿದೆ ಎಂದರು.

Advertisement

ಮೂರನೇ ಸಲ ಭೀಮಣ್ಣ ಸ್ಪರ್ಧೆಗೆ ನಿಂತಿದ್ದಾರೆ. ಅವರಿಗೆ ಈ ಬಾರಿ ಶಿಕ್ಷೆ ಕೊಡಬೇಡಿ. ಬಂಗಾರಪ್ಪ ಅವರಿಗೆ ಭೀಮಣ್ಣ ಅವರು ವಿಧಾನ ಸಭೆಗೆ ಹೋಗಬೇಕು ಎಂಬುದು ಕನಸಿತ್ತು‌. ಅದನ್ನು‌ ನನಸಾಗಿಸುವ ಕಾರ್ಯ ಆಗಬೇಕು ಎಂದರು.

ಈ ವೇಳೆ ಸತೀಶ ನಾಯ್ಕ, ಎಸ್.ಕೆ.ಭಾಗವತ್, ಜಗದೀಶ ಗೌಡ, ಪ್ರದೀಪ ಶೆಟ್ಟಿ, ಅಬ್ಬಾಸ ತೋನಸೆ, ಸಿ.ಏಪ್.ನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next