Advertisement

ಜಿಕೆ ಡೆಕೋರೇಟರ್ ಸ್ಥಾಪಕ ಎಂ. ಗಣೇಶ್‌ ಕಾಮತ್‌ ನಿಧನ

12:26 AM Mar 04, 2023 | Team Udayavani |

ಮೂಡುಬಿದಿರೆ: ಯುವ ಉದ್ಯಮಿ, ಜಿ.ಕೆ.ಡೆಕೋರೇಟರ್ ಮತ್ತು ಪಡುಮಾರ್ನಾಡಿನ ಜಿ.ಕೆ ಗಾರ್ಡನ್‌ ಸಿಟಿ ಸ್ಥಾಪಕ ಗಣೇಶ್‌ ಕಾಮತ್‌ (48) ಮಾ. 3ರಂದು ಹೃದಯಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದಿರೆ ಘಟಕದ ಶಾಮಿಯಾನ ಮಾಲಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಪ್ರಸ್ತುತ ಗೌರವಾಧ್ಯಕ್ಷರಾಗಿದ್ದರು.

Advertisement

ಗಣೇಶ್‌ ಕಾಮತ್‌ 2001ರಲ್ಲಿ ಕಾರ್ಕಳ ಕ್ರೀಡಾಂಗಣ ಒಂದರಲ್ಲಿ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾಟಕ್ಕಾಗಿ ಬೆಳಕಿನ ವ್ಯವಸ್ಥೆಯಲ್ಲಿ ತೊಡಗಿದ್ದಾಗ ವಿದ್ಯುತ್‌ ಸ್ಪರ್ಶವಾಗಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಅನಂತರ ಮೂಡುಬಿದಿರೆ ರೋಟರಿ ಸಂಸ್ಥೆಯು ಅವರಿಗೆ ಕೃತಕ ಕೈಗಳ ಕೊಡುಗೆ ನೀಡಿದಾಗ ಅವರ ಬದುಕು ಹೊಸಚೇತನದೊಂದಿಗೆ ಅರಳಲು ಸಾಧ್ಯವಾಯಿತು. ಸ್ವಂತ ಜಿ.ಕೆ. ಡೆಕೋರೇಟರ್ ಎಂಬ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸತೊಡಗಿದರು. ಹತ್ತಾರು ಮಂದಿಗೆ ಉದ್ಯೋಗದಾತರಾದರು. ಹಲವು ಸಂಘ ಸಂಸ್ಥೆಗಳಿಂದ ಸಮ್ಮಾನಿತರಾಗಿದ್ದರು.

ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಅಭಯಚಂದ್ರ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ., ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆವಿ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next