Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯಲ್ಲಿ ಕೇವಲ 3.9 ಟಿಎಂಸಿ ಅಡಿ ನೀರು ಯಾವುದಕ್ಕೂ ಸಾಕಾಗುವುದಿಲ್ಲ. ಹೀಗಾಗಿ ನಮಗೆ ಸಂಪೂರ್ಣವಾಗಿ 7.5 ಟಿಎಂಸಿ ಅಡಿನೀರು ಸಿಗಬೇಕು ಎಂಬುದು ನಮ್ಮ ನಿಲುವು. ಮೇಕೆದಾಟು ಪಾದಯಾತ್ರೆ ಮಾದರಿಯಲ್ಲಿ ಮಹದಾಯಿಗಾಗಿ ಪಾದಯಾತ್ರೆ ನಡೆಸುವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಈಗಾಗಲೇ ಅಧಿಕೃತವಾಗಿ ಹೇಳಿದ್ದಾರೆ ಎಂದರು. ಖಾನಾಪುರಕ್ಕೆ 1.5 ಟಿಎಂಸಿ ಅಡಿ ನೀರು ಸಿಕ್ಕಿದ್ದು, ಈ ಭಾಗದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ಇನ್ನೂ ಹೆಚ್ಚಿನ ನೀರು ಸಿಗಬೇಕಿದೆ. 36 ಟಿಎಂಸಿ ಅಡಿ ನೀರಿಗಾಗಿ ಒತ್ತಾಯ ಮಾಡಿದ್ದೆವು. ಅದರಲ್ಲಿ ವಿಶೇಷವಾಗಿ 7.5 ಟಿಎಂಸಿ ಅಡಿ ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕು. ನಾನು ಆಗ ಗೋವಾ ಮುಖ್ಯಮಂತ್ರಿ
ಮನೋಹರ್ ಪರೀಕರ್ ಅವರನ್ನು ಭೇಟಿಯಾಗಿ ಬಂದು ಡಿಪಿಆರ್ ಮಾಡಿ, ಆಡಳಿತಾತ್ಮಕ ಅನುಮೋದನೆ ಕೊಟ್ಟ ನಂತರ ಈಗ ಇವರು ಮಾತನಾಡುತ್ತಿದ್ದಾರೆ. ಅಂದು ಎಂ.ಬಿ. ಪಾಟೀಲ್ ಸುಮ್ಮನೆ ಕೂತಿದ್ದರೆ ಏನಾಗುತ್ತಿತ್ತು?