Advertisement

ಶಶಿಕಲಾಗೆ ಐಷಾರಾಮಿ ಜೈಲು

01:00 AM Jan 21, 2019 | Team Udayavani |

ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪೆ¤ ವಿ.ಕೆ.ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದುದು ನಿಜ ಎಂಬ ವಿಚಾರ ಈಗ ಬಹಿರಂಗಗೊಂಡಿದೆ.

Advertisement

ತನಿಖಾ ಸಮಿತಿ ನೀಡಿರುವ ವರದಿ ಪ್ರಕಾರ, ಶಶಿಕಲಾಗಾಗಿ ಇಡೀ ಕಾರಿಡಾರ್‌ ಅನ್ನೇ ಖಾಲಿ ಮಾಡಿಸ ಲಾಗಿತ್ತು. ಅಷ್ಟೇ ಅಲ್ಲ, ಶಶಿಕಲಾ ಪ್ರತ್ಯೇಕ ವಾಗಿ ಅಡುಗೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಜೈಲಿನ ನಿಯಮ ಗಳನ್ನು ಉಲ್ಲಂ ಸಿ ಇತರ ಸೌಲಭ್ಯ ಗಳನ್ನೂ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ. ಜೈಲಿನ ಅಧಿಕಾರಿ ಡಿ.ರೂಪಾ ಈ ಹಿಂದೆಯೇ ಈ ಬಗ್ಗೆ ಆಕ್ಷೇಪಿಸಿದ್ದ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ವಿನಯ ಕುಮಾರ್‌ ಅವರನ್ನು ಈ ಪ್ರಕರಣದ ತನಿಖೆಗೆ ನಿಯೋ ಜಿಸ ಲಾಗಿತ್ತು. ರೂಪಾ ಭೇಟಿ ನೀಡಿ ದ್ದಾಗ 5 ಸೆಲ್‌ಗ‌ಳನ್ನು ಶಶಿಕಲಾಗಾಗಿ ಮೀಸಲಿಡಲಾಗಿತ್ತು. ಈ ಸೆಲ್‌ನ ಎರಡೂ ಕಡೆಗೆ ಬ್ಯಾರಿ ಕೇಡ್‌ಗಳನ್ನು ಹಾಕಿ ಇತರರು ಆಗಮಿಸ ದಂತೆ ತಡೆಯ ಲಾಗಿತ್ತು. ಎಲ್ಲ ಸೆಲ್‌ ಗಳಲ್ಲೂ ಶಶಿಕಲಾಗೆ ಸಂಬಂಧಿಸಿದ ಸಾಮಗ್ರಿ ಗಳಿದ್ದವು.

ಅಷ್ಟೇ ಅಲ್ಲ, ಡಿಐಜಿ ರೂಪಾ ಪರಿಶೀಲನೆಗೆ ಆಗಮಿಸಿದ್ದಾಗ ಅಡುಗೆ ಮಾಡಲು ಬಳಸುವ ಪಾತ್ರೆಗಳು, ಪ್ರಶರ್‌ ಕುಕ್ಕರ್‌ ಕೂಡ ಕಂಡುಬಂದಿದೆ ಎಂದು ಹೇಳಿದ್ದರು. ಇದನ್ನೂ ವಿನಯ ಕುಮಾರ್‌ ಸಮ್ಮತಿಸಿದ್ದು, ಶಶಿಕಲಾಗೆ ಉನ್ನತ ದರ್ಜೆಯ ಸೌಲಭ್ಯ ಒದಗಿಸ ಲಾಗುತ್ತಿದ್ದುದನ್ನು ಉಲ್ಲೇಖೀಸಿದ್ದಾರೆ. ಅಕ್ರಮ ಸ್ವತ್ತು ಗಳಿಕೆ ಪ್ರಕರಣದಲ್ಲಿ 2017 ಫೆಬ್ರವರಿಯಲ್ಲಿ ಶಶಿಕಲಾ ಜೈಲು ಸೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next