Advertisement

ಉತ್ತರಪ್ರದೇಶ; ಗಂಟಲು ಸೀಳಿ ಹಿಂದೂ ಸಮಾಜ್ ಪಕ್ಷದ ಮುಖಂಡ ತಿವಾರಿ ಹತ್ಯೆ

11:40 AM Oct 19, 2019 | Team Udayavani |

ಲಕ್ನೋ:ಅಪರಿಚಿತ ವ್ಯಕ್ತಿಗಳು ಹಾಡಹಗಲೇ ಹಿಂದೂ ಸಮಾಜ್ ಪಕ್ಷದ ಮುಖಂಡ ಕಮಲೇಶ್ ತಿವಾರಿಯ ಗುಂಡು ಹಾರಿಸಿ, ನಂತರ ಕತ್ತನ್ನು ಸೀಳಿ ಆರೋಪಿಗಳು ಓಡಿಹೋಗಿರುವ ಘಟನೆ ಲಕ್ನೋದಲ್ಲಿ ಶುಕ್ರವಾರ ನಡೆದಿದೆ.

Advertisement

ಲಕ್ನೋದ ಖುರ್ಷಿದ್ ಬಾಗ್ ನಲ್ಲಿರುವ ಹಿಂದೂ ಸಮಾಜ್ ಪಕ್ಷದ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಕೋರರು ಕಚೇರಿಗೆ ಬಂದು ಕೆಲವು ಮಾತುಕತೆ ನಂತರ ಟೀ ಕುಡಿದು ಹರಿತವಾದ ಆಯುಧದಿಂದ ಕತ್ತು ಸೀಳಿ, ಕಂಟ್ರಿಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿ ಓಡಿ ಹೋಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಿವಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ತಿವಾರಿ ಮೊದಲು ಹಿಂದೂ ಮಹಾಸಭಾದಲ್ಲಿದ್ದು, ನಂತರ ಹಿಂದೂ ಸಮಾಜ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2015ರಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ವಿವಾದಿತ ಹೇಳಿಕೆ ನೀಡಿದ್ದು, ಉತ್ತರಪ್ರದೇಶ ಪೊಲೀಸರು ತಿವಾರಿ ವಿರುದ್ಧ ಎನ್ ಎಸ್ ಎ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದರು.

ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ತಿವಾರಿ ಮೇಲೆ ಹಾಕಲಾಗಿದ್ದ ಎನ್ ಎಸ್ ಜಿ ಆರೋಪವನ್ನು ವಜಾಗೊಳಿಸಿ ಜಾಮೀನು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next