Advertisement

LS poll ಅಭಿವೃದ್ಧಿಗಾಗಿ ಮತ ಮತ್ತು ‘ಜಿಹಾದ್‌ಗೆ ಮತ ಹಾಕಿ’ ನಡುವಿನ ಸ್ಪರ್ಧೆ: ಶಾ

06:06 PM May 09, 2024 | Team Udayavani |

ಭೋಂಗಿರ್: 2024 ರ ಲೋಕಸಭಾ ಚುನಾವಣೆ ರಾಹುಲ್ ಗಾಂಧಿ ವರ್ಸಸ್ ನರೇಂದ್ರ ಮೋದಿ ಮತ್ತು ಇದು ಅಭಿವೃದ್ಧಿಗಾಗಿ ಮತ ಮತ್ತು “ಜಿಹಾದ್‌ಗೆ ಮತ ಹಾಕಿ” ನಡುವಿನ ಸ್ಪರ್ಧೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ತೆಲಂಗಾಣದ ಭೋಂಗಿರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿ’ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ “ಚೀನೀ ಗ್ಯಾರಂಟಿ” ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ “ಭಾರತೀಯ ಗ್ಯಾರಂಟಿ” ನಡುವೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್, ಬಿಆರ್‌ಎಸ್ ಮತ್ತು ಎಐಎಂಐಎಂ ತುಷ್ಟೀಕರಣದ ತ್ರಿಕೋನ. ಪಕ್ಷಗಳು ರಾಮನವಮಿ ಮೆರವಣಿಗೆಯನ್ನು ನಡೆಸಲು ಬಿಡುವುದಿಲ್ಲ ಮತ್ತು ಅವರು ಸಿಎಎಯನ್ನು ಸಹ ವಿರೋಧಿಸುತ್ತಾರೆ ಎಂದರು.

“ಈ ಜನರು ‘ಹೈದರಾಬಾದ್ ವಿಮೋಚನಾ ದಿನ’ (ಸೆ 17) ಆಚರಿಸಲು ಅನುಮತಿಸುವುದಿಲ್ಲ. ಈ ಜನರು ಸಿಎಎ ವಿರೋಧಿಸುತ್ತಾರೆ. ಷರಿಯಾ ಮತ್ತು ಕುರಾನ್ ಆಧಾರದ ಮೇಲೆ ತೆಲಂಗಾಣದಲ್ಲಿ ಆಳ್ವಿಕೆ ನಡೆಸಲು ಬಯಸುತ್ತಾರೆ, ”ಎಂದು ಕಿಡಿ ಕಾರಿದರು.

ತೆಲಂಗಾಣ ಜನತೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ 10ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ನೀಡಿ ಆಶೀರ್ವದಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕಾರಣದಿಂದ ಅವರು ಬೇಸತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next