Advertisement

ಅಗಲಿದ ಬಿಜೆಡಿ ಸಂಸದನಿಗೆ ಶ್ರದ್ಧಾಂಜಲಿ; ಕಲಾಪ ಮುಂದೂಡಿಕೆ

06:21 AM Feb 06, 2019 | udayavani editorial |

ಹೊಸದಿಲ್ಲಿ : ಹಿರಿಯ ಬಿಜು ಜನತಾ ದಳ ನಾಯಕ ಮತ್ತು ಲೋಕಸಭಾ ಸದಸ್ಯ, 71ರ ಹರೆಯದ ಲಾಡು ಕಿಶೋರ್‌ ಸ್ವೇನ್‌ ಅವರು ದೀರ್ಘ‌ ಕಾಲದ ಅಸ್ವಾಸ್ಥ್ಯದ ಬಳಿಕ ಇಂದು ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಪ್ರಯುಕ್ತ  ಸದನದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾದ ಬಳಿಕ ಲೋಕಸಭೆಯ ಕಲಾಪವನ್ನು ಇಂದಿನ ಮಟ್ಟಿಗೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಮುಂದೂಡಿದರು 

Advertisement

ಇಂದು ಲೋಕಸಭೆ ಸಮಾವೇಶವಾದೊಡನೆಯೇ ಸುಮಿತ್ರಾ ಮಹಾಜನ್‌ ಅವರು ಬಿಜೆಡಿ ಹಿರಿಯ ನಾಯಕ ನಿಧನ ಹೊಂದಿರುವ ವಿಷಯವನ್ನು ಸದನಕ್ಕೆ ತಿಳಿಸಿದರು. 71ರ ಹರೆಯದ ಬಿಜೆಡಿ ನಾಯಕ ಲಾಡು ಕಿಶೋರ್‌ ಅವರು ಅಕ್ಸಾ ಕ್ಷೇತ್ರದ ಸಂಸದರು. ಇವರು ಒಡಿಶಾ ವಿಧಾನಸಭೆಯಲ್ಲಿ 2004ರಿಂದ 2009ರ ವರೆಗಿನ ಅವಧಿಯಲ್ಲಿ ಶಾಸಕರಾಗಿದ್ದರು.

ಅಗಲಿದ ಬಿಜೆಡಿ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸುವಾಗ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ಪ್ರಮುಖರು ಸದನದಲ್ಲಿ ಉಪಸ್ಥಿತರಿದ್ದರು. 

ಸದನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯು ನಾಳೆ ಗುರುವಾರ ಮುಂದುವರಿಯಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರ ನೀಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next