Advertisement

ಪ್ರೇಮ ವಿವಾದ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣ: ಚಿಕಿತ್ಸೆ ಫಲಿಸದೆ ಯುವಕ ಸಾವು

10:46 PM Jul 18, 2023 | Team Udayavani |

ರಾಮನಗರ: ಪ್ರೀತಿಯ ಕಾರಣಕ್ಕೆ ಯುವತಿಯ ಕಡೆಯವರಿಂದ ಕೊಲೆ ಯತ್ನಕ್ಕೊಳಪಟ್ಟು ಬದುಕುಳಿದಿದ್ದ ಬೆಂಗಳೂರಿನ ಆರ್.ಆರ್.ನಗರದ ಇಂಜಿನಿಯರಿಂಗ್ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

Advertisement

ಶಶಾಂಕ್ (18) ಮೃತ ವಿದ್ಯಾರ್ಥಿ. ಜು.15 ರಂದು ಬೆಂಗಳೂರಿನ ಎಸಿಎಸ್ ಕಾಲೇಜು ಸಮೀಪ ಈತ ಪ್ರೀತಿಸುತ್ತಿದ್ದ ಯುವತಿಯ ದೊಡ್ಡಪ್ಪ ಮನು ಮತ್ತು ಇತರೆ6 ಮಂದಿ ಈತನನ್ನು ಅಪಹರಿಸಿ ಎಕ್ಸ್ ಪ್ರೆಸ್ ವೇ ಕಣ್ಮಿಣಕೆ ಟೋಲ್ ಸಮೀಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದರು.

ತೀವ್ರಗಾಯಗೊಂಡಿದ್ದ ಈತ ತನ್ನ ಸ್ನೇಹಿತರಿಗೆ ದೂರವಾಣಿ ಕರೆಮಾಡಿ ತಿಳಿಸಿದ್ದ. ಮೊಬೈಲ್ ಲೊಕೇಷನ್ ಸಹಾಯದಿಂದ ಸ್ಥಳಕ್ಕೆ ಅಗಮಿಸಿದ್ದ ಈತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಸುಟ್ಟು ಗಾಯಗಳಿಂದ ನರಳುತ್ತಿದ್ದ ಈತ ಆಸ್ಪತ್ರೆ ಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next