Advertisement

ಚಾಲಕರು ಮಲಗಿದ್ದಾಗಲೇ ಲಾರಿ ಚಕ್ರ ಕಳವು!

10:49 AM Apr 16, 2018 | Team Udayavani |

ಗ‌ಂಗೊಳ್ಳಿ: ಲಾರಿ ನಿಲ್ಲಿಸಿ ಚಾಲಕರು ಅದರೊಳಗೆ ಮಲಗಿದ್ದಾಗಲೇ  ಚಕ್ರಗಳನ್ನು  ಕಳಚಿ ಕಳವು ಮಾಡಿದ ಘಟನೆ  ತ್ರಾಸಿ ಬಳಿ ಶನಿವಾರ ರಾತ್ರಿ ನಡೆದಿದೆ.

Advertisement

ಸೈಜಾದ್‌, ರಘುವೀರ್‌ ಸಿಂಗ್‌ ರಾಜಾವತ್‌ ಹಾಗೂ  ಅಲಿ ಹುಸೇನ್‌ ಅವರು ಎ.11ರಂದು ಮಧ್ಯಪ್ರದೇಶ ರಾಜ್ಯದ  ಇಂದೋರ್‌ನ ಪಿತಮ್‌ಪುರದ ಪಿ.ಎಲ್‌. ಟ್ರಾನ್ಸ್‌ಪೊàರ್ಟ್‌ ಯಾರ್ಡ್‌ನಿಂದ  ಮಂಗಳೂರು ಯಾರ್ಡ್‌ಗೆ  ಈಚರ್‌ ಕಂಪೆನಿಯ ಲಾರಿಗಳನ್ನು ಚಲಾಯಿಸಿಕೊಂಡು ಬಂದಿದ್ದರು. ಎ. 14ರಂದು ರಾತ್ರಿ 9 ಗಂಟೆಗೆ ತ್ರಾಸಿ ಬೀಚ್‌ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿದ್ದು, ಅಲ್ಲಿಯೇ ಸಮೀಪದ ಹೊಟೇಲ್‌ನಲ್ಲಿ ಊಟ ಮಾಡಿ ರಾತ್ರಿ 10 ಗಂಟೆಗೆ ತಮ್ಮ   ಲಾರಿಗಳಲ್ಲಿ ಮಲಗಿದ್ದರು. ಎ. 15ರಂದು ಬೆಳಗ್ಗೆ 6 ಗಂಟೆಗೆ  ಎದ್ದು ನೋಡಿದಾಗ 1 ಲಾರಿಯ 6 ಚಕ್ರಗಳು ಹಾಗೂ ಇತರ ಎರಡು ಲಾರಿಗಳ ತಲಾ 2  ಚಕ್ರಗಳನ್ನು  ಕದಿಯಲಾಗಿತ್ತು. ಕಳವಾದ ಚಕ್ರಗಳ ಮೌಲ್ಯ 2.40 ಲಕ್ಷ ರೂ. ಆಗಿದೆ. 

ಲಾರಿ ಚಾಲಕ ಮಧ್ಯಪ್ರದೇಶದ ಇಂದೋರ್‌ನ  ಸೈಜಾದ್‌ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next