Advertisement

ಮಗುಚಿ ಬಿದ್ದ ಬಿಯರ್ ಬಾಟಲಿ ತುಂಬಿದ್ದ ಲಾರಿ! ಬಿಯರ್ ಗೆ ಮುಗಿಬಿದ್ದ ಜನತೆ

03:55 PM Jan 19, 2021 | Team Udayavani |

ಅರಂತೋಡು: ಮೈಸೂರುನಿಂದ ಮಂಗಳೂರು ಕಡೆ ಬಿಯರ್ ಬಾಟಲಿ ಸಾಗಾಟ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡು ಕೊಡೆಂಕೇರಿ ತಿರುವಿನಲ್ಲಿ ರವಿವಾರ ಸಂಜೆ ನಡೆದಿದೆ.

Advertisement

ಘಟನೆಯಲ್ಲಿ ಚಾಲಕ ಮತ್ತು ಸಹಚಾಲಕರಿಗೆ ಗಾಯವಾಗಿದೆ. ಘಟನೆಯಲ್ಲಿ ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ತಂತಿಯು ಲಾರಿಯ ಮೇಲ್ಗಡೆ ಬಿದ್ದಿದೆ.  ಆ ಸಮಯದಲ್ಲಿ ವಿದ್ಯುತ್ ಪ್ರವಾಹವಿಲ್ಲದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದೆ.

ಬಿಯರ್ ಲಾರಿ ಪಲ್ಟಿ ಹೊಡೆದ ಕಾರಣ ಕೆಲವರು ಬಿಯರ್ ಬಾಟಲಿಗಾಗಿ ಮುಗಿಬಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೋವಿಡ್ ಸೋಂಕಿಗೆ ಹೆದರಿ 3 ತಿಂಗಳು ವಿಮಾನ ನಿಲ್ದಾಣದಲ್ಲಿ ಅಡಗಿ ಕುಳಿತ ಭಾರತೀಯ ವ್ಯಕ್ತಿ!

Advertisement
Advertisement

Udayavani is now on Telegram. Click here to join our channel and stay updated with the latest news.

Next