Advertisement

ಲಾರಿ ಪಲ್ಟಿ: ಬಸ್‌ ತಂಗುದಾಣದಲ್ಲಿದ್ದ ವ್ಯಕ್ತಿಗೆ ಗಂಭೀರ ಗಾಯ

09:50 PM May 26, 2023 | Team Udayavani |

ಮಂಗಳೂರು: ನಗರದ ಹೊರ ವಲಯದ ಬಾಳೆಪುಣಿ ಗ್ರಾಮದ ಮೂಳೂರು ಎಂಬಲ್ಲಿ ಬಸ್‌ ತಂಗುದಾಣದ ಮೇಲೆ ಲಾರಿ ಉರುಳಿ ಬಿದ್ದ ಪರಿಣಾಮ ತಂಗುದಾಣದೊಳಗಿದ್ದ ರಾಮದಾಸ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಕುಟುಂಬದ ದೈವಾರಾಧನೆಗೆ ಬಂದಿದ್ದ ಮೋಹನದಾಸ್‌ ಮತ್ತು ರಾಮದಾಸ್‌ ಅವರು ಗುರುವಾರ ರಾತ್ರಿ ಮೂಳೂರು ಬಸ್‌ ತಂಗುದಾಣದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಜೈಲು ರಸ್ತೆಯಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಸ್‌ ತಂಗುದಾಣದ ಮೇಲೆ ಬಿದ್ದಿದೆ. ಪರಿಣಾಮ ರಾಮದಾಸ್‌ ಅವರ ತಲೆಗೆ ಬಸ್‌ ತಂಗುದಾಣದ ಮೇಲ್ಛಾವಣಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿಯಲ್ಲಿದ್ದ ಪ್ರಯಾಣಿಕ ಕೃಷ್ಣಪ್ಪ ಅವರಿಗೆ ಸಣ್ಣ ಮಟ್ಟಿನ ಗಾಯವಾಗಿದೆ. ಗಾಯಾಳುಗಳನ್ನು ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ಹಾಗೂ ಮೋಹನದಾಸ್‌ ಅವರು ಪಾರಾಗಿದ್ದಾರೆ. ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next