Advertisement

ಅರಂತೋಡು: ಲಾರಿ ಬಸ್ಸು ಅಪಘಾತ; ಹಲವು ಮಂದಿಗೆ ಗಾಯ

06:39 PM Nov 15, 2022 | Team Udayavani |

ಅರಂತೋಡು: ಕಲ್ಲುಗುಂಡಿ ಸಮೀಪ ಕಡಪಾಲ ಸೇತುವೆ ಬಳಿ ಲಾರಿ ಹಾಗೂ ಬಸ್ ನಡುವೆ ನಡೆದ ಅಪಘಾತದ ಪರಿಣಾಮ ಹಲವರು ಗಾಯಗೊಂಡ ಘಟನೆ ಮಂಗಳವಾರ (ನ.15ರಂದು) ಸಂಜೆ ನಡೆದಿದೆ.

Advertisement

ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್‌ಗೆ ಲಾರಿ ಢಿಕ್ಕಿ ಹೊಡೆದಿರುವುದಾಗಿ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ .

ಗಾಯಾಳುಗಳನ್ನು ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ.ಇನ್ನೋರ್ವ ಗಾಯಾಳು ಬಸ್ಸಿನ ಒಳಗೆ ಸಿಲುಕಿದ್ದು , ಅವರನ್ನು ಹೊರ ತೆಗೆಯಲು ಸೀಟ್‌ನ ರಾಡ್ ಕಟ್ ಮಾಡಿ ತೆಗೆದು ಬಳಿಕ ಸರಕಾರಿ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಕಡೆಗೆ ತರಲಾಯಿತೆಂದು ತಿಳಿದುಬಂದಿದೆ . ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next