Advertisement

ಆಟೋಗೆ ಲಾರಿ ಢಿಕ್ಕಿ:ಪ್ರಯಾಣಿಕ ಸಾವು,ಚಾಲಕ ಗಂಭೀರ 

11:14 AM Dec 15, 2017 | Team Udayavani |

ಕುಂದಾಪುರ: ಇಲ್ಲಿನ ಹೆಮ್ಮಾಡಿ ಬಳಿ ಶುಕ್ರವಾರ ನಸುಕಿನ 2 ಗಂಟೆಯ ವೇಳಗೆ  ಲಾರಿ ಯೊಂದು ಆಟೋ ರಿಕ್ಷಾಗೆ ಢಿಕ್ಕಿಯಾದ ಪರಿಣಾಮ ಪ್ರಯಾಣಿಕ ದಾರುಣವಾಗಿ ಸಾವನ್ನಪ್ಪಿದ್ದು, ಆಟೋ ಚಾಲಕ ಗಂಭೀರವಾಗಿ  ಗಾಯಗೊಂಡಿರುವ ದುರ್ಘ‌ಟನೆ ನಡೆದಿದೆ. 

Advertisement

ಮೃತ ವ್ಯಕ್ತಿ ಸೊರಬ  ನಿವಾಸಿ ಗಣೇಶ್‌ ಪೂಜಾರಿ ಎನ್ನುವವರಾಗಿದ್ದು, ಕುಂದಾಪುರದಿಂದ ಹೆಮ್ಮಾಡಿ ಬಳಿಯಿರುವ ಕನ್ನಡಕುದ್ರುವಿನ ಪತ್ನಿಯ ಮನೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. 

  ಗಣೇಶ್‌  ಅಪಘಾತವಾಗುವ ಮುನ್ನ ಪತ್ನಿಗೆ ಕರೆ ಮಾಡಿ ಇನ್ನೈದು ನಿಮಿಷದಲ್ಲಿ ಮನೆಯಲ್ಲಿ ಇರುತ್ತೇನೆ ಎಂದಿದ್ದರು. ಹೆಮ್ಮಾಡಿಯಲ್ಲಿ ನಡು ರಾತ್ರಿ ಆಟೋ ರಿಕ್ಷಾ ಸಿಗುವುದಿಲ್ಲವೆಂದು ಕುಂದಾಪುರದಲ್ಲಿ ಬಸ್‌ ಇಳಿದು ಆಟೋ ಹಿಡಿದಿದ್ದರು ಎಂದು ತಿಳಿದು ಬಂದಿದೆ. 

ಅಪಘಾತವಾದೊಡನೆಯೇ ಗಂಗೊಳ್ಳಿಯ ಅಂಬುಲೆನ್ಸ್‌ ನಿರ್ವಹಿಸುತ್ತಿರುವ ಇಬ್ರಾಹಿಂ ಅವರು ಸ್ಥಳಕ್ಕಾಗಮಿಸಿ  ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. 

ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next