Advertisement

ಧಾರವಾಡದಲ್ಲಿ  ಕಾರು-ಲಾರಿ ಮುಖಾಮುಖಿ; ಸಹೋದರರಿಬ್ಬರ ದಾರುಣ ಸಾವು 

12:23 PM Nov 06, 2018 | Team Udayavani |

ಧಾರವಾಡ: ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮವಾಗಿ ಕಾರಿನಲ್ಲಿದ್ದ ಸಹೋದರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ನಗರದ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ಮಂಗಳವಾರ ನಡೆದಿದೆ. 

Advertisement

ಮೃತ ದುರ್‌ದೈವಿಗಳು ಸಿದ್ದಲಿಂಗಪ್ಪ ಗಳೇಸಿಂಗಿ (33) ಮತ್ತು ಮಹೇಶ್‌ ಗುಳೇಸಿಂಗಿ ಎಂದು ತಿಳಿದು ಬಂದಿದೆ. 

ಅವಘಡದಲ್ಲಿ ಲಾರಿ ಚಾಲಕನಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next