Advertisement

ಹನುಮಂತ ಬುಡಕಟ್ಟು ಜನಾಂಗದವರು: ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ

05:40 PM Jun 10, 2023 | Team Udayavani |

ಭೋಪಾಲ್: ಹಿಂದೂ ಮಹಾಕಾವ್ಯ ರಾಮಾಯಣದ ಭಗವಾನ್ ಹನುಮಾನ್ ನಂತೆ ಬುಡಕಟ್ಟು ಜನಾಂಗದವರು ಎಂದು ಮಧ್ಯಪ್ರದೇಶದ ಮಾಜಿ ಅರಣ್ಯ ಸಚಿವ ಮತ್ತು ಧಾರ್ ಜಿಲ್ಲೆಯ ಗಂಧ್ವಾನಿಯ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ್ ಹೇಳಿದ್ದಾರೆ.

Advertisement

ಅವರು ಇಂದು ಧಾರ್ ಜಿಲ್ಲೆಯಲ್ಲಿ ಬಿರ್ಸಾ ಮುಂಡಾ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

“ರಾಮನನ್ನು ಲಂಕೆಗೆ ಕರೆದೊಯ್ದದ್ದು ಆದಿವಾಸಿಗಳು, ಕೆಲವರು ಕಥೆಗಳಲ್ಲಿ ವಾನರ ಸೇನೆ ಎಂದು ಬರೆದಿದ್ದಾರೆ, ಯಾವುದೇ ಮಂಗಗಳು ಇರಲಿಲ್ಲ, ಅವರು ಆದಿವಾಸಿಗಳು ಮತ್ತು ಅವರು ಕಾಡಿನಲ್ಲಿ ವಾಸಿಸುತ್ತಿದ್ದರು. ಹನುಮಂತ ಕೂಡ ಆದಿವಾಸಿ. ನಾವು ಅವನ ವಂಶಸ್ಥರು, ಇದು ಹೆಮ್ಮೆ” ಎಂದು ಸಿಂಘರ್ ಹೇಳಿದರು.

ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಬಿಜೆಪಿ ವಕ್ತಾರ ಹಿತೇಶ್ ಬಾಜ್‌ಪೇಯ್, “ಅವರು ಹನುಮಂತರನ್ನು ದೇವರೆಂದು ಪರಿಗಣಿಸುವುದಿಲ್ಲ! ಅವರು ಹನುಮಂತನನ್ನು ಹಿಂದೂಗಳು ಪೂಜಿಸುತ್ತಾರೆ ಎಂದೂ ಪರಿಗಣಿಸುವುದಿಲ್ಲ! ಅವರು ಹನುಮಾನ್ ಜಿಯನ್ನು ಅವಮಾನಿಸುತ್ತಾರೆ!” ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next