Advertisement

ನಟರನ್ನು ನೋಡಿ ಹೀರೋ ಆದವರು

06:00 AM Nov 17, 2017 | Team Udayavani |

ಬಾಲಚಂದರ್‌ ಡ್ಯಾನ್ಸ್‌ ಕ್ಲಾಸಿಗೆ ಹೋಗುತ್ತಿದ್ದರಂತೆ. ಅಲ್ಲಿಗೆ ಒಂದಷ್ಟು ಸಿನಿಮಾ ಮಂದಿಯೂ ಬರುತ್ತಿದ್ದರಂತೆ. ಸಿನಿಮಾದವರನ್ನು ನೋಡಿದ ಬಾಲಚಂದರ್‌ಗೆ ತಾನೂ ಸಿನಿಮಾ ಹೀರೋ ಆಗಬೇಕು, ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಹುಟ್ಟಿತಂತೆ. ಆ ಆಸೆಯನ್ನು ಹೇಗಾದರೂ ಮಾಡಿ ಈಡೇರಿಸಿಕೊಳ್ಳಬೇಕೆಂದು ಪಣತೊಟ್ಟ ಬಾಲಚಂದರ್‌ ಅವರ ಆಸೆ ಈಗ ಈಡೇರಿದೆ. ಅದು “ಮಹಾನುಭಾವರು’ ಮೂಲಕ. ಹೌದು, ಇಂದು ತೆರೆಕಾಣುತ್ತಿರುವ “ಮಹಾನುಭಾವರು’ ಚಿತ್ರದಲ್ಲಿ ಬಾಲಚಂದರ್‌ ಹೀರೋ ಆಗಿ ನಟಿಸಿದ್ದಾರೆ. ಈ ಮೂಲಕ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ. ಬಾಲಚಂದರ್‌ ಮೂಲತಃ ಗುಬ್ಬಿಯವರು. ಸಹಜವಾಗಿಯೇ ಸಿನಿಮಾ ಮೇಲೆ ಆಸಕ್ತಿ ಹೆಚ್ಚಿತ್ತಂತೆ. ಡಿಪ್ಲೊಮಾ ಮಾಡಿ ಮೆಕ್ಯಾನಿಕಲ್‌ ಫೀಲ್ಡ್‌ನಲ್ಲಿ ಮುಂದುವರಿದರೂ ಅವರ ಆಸಕ್ತಿ ಮಾತ್ರ ಸಿನಿಮಾ ಕಡೆಗಿತ್ತಂತೆ. ಹಾಗಾಗಿ, ಬಣ್ಣದ ಲೋಕಕ್ಕೆ ಬಂದಿದ್ದಾರೆ. 

Advertisement

ಸಿನಿಮಾಕ್ಕೆ ಬರುವ ಮುನ್ನ ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ಸಿನಿಮಾ ಪ್ರವೃತ್ತಿಯಾಗಬೇಕು. ಅದರ ಜೊತೆಗೆ ವೃತ್ತಿಯೊಂದು ಇರಬೇಕೆಂದುಕೊಂಡ ಬಾಲಚಂದರ್‌, ತಮ್ಮದೇ ಆದ ಬಿಝಿನೆಸ್‌ ಆರಂಭಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅತ್ತ ಕಡೆ ಬಿಝಿನೆಸ್‌ ನಡೆಯುತ್ತಿದ್ದರೆ, ಇತ್ತ ಕಡೆ ಇವರ ಸಿನಿಪಯಣ ಆರಂಭವಾಗಿದೆ.

“ಮಹಾನುಭಾವರು’ ಮೂಲಕ ಬರುವ ತಮ್ಮನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಕೂಡಾ ಬಾಲಚಂದರ್‌ಗಿದೆ. “ಈ ಚಿತ್ರದಲ್ಲಿ ಪ್ಲ್ರಾನಿಂಗ್‌ ಹಾಗೂ ಅನ್‌ಪ್ಲ್ರಾನಿಂಗ್‌ ಬಗ್ಗೆ ಹೇಳಲಾಗಿದೆ. ನಾನಿಲ್ಲಿ ಎಲ್ಲವನ್ನು ಪ್ಲ್ರಾನ್‌ ಮಾಡಿ, ಜೀವನ ನಡೆಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಜನರಿಗೆ ಇಷ್ಟವಾಗುತ್ತದೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಬಾಲಚಂದರ್‌. ಅವರಿಗೆ ಸಿನಿಮಾ ರಂಗದಲ್ಲಿ ಮುಂದುವರಿಯುವ ಆಸೆ ಹಾಗೂ ವಿಶ್ವಾಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next